alex Certify ಮದುವೆಗೆ ಅಡ್ಡಿಯಾದ ವ್ಯಕ್ತಿ ಬರ್ಬರ ಕೊಲೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಅಡ್ಡಿಯಾದ ವ್ಯಕ್ತಿ ಬರ್ಬರ ಕೊಲೆ..!

ಮದುವೆಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ವರನೊಬ್ಬ ತನ್ನ ಭಾವಿ ಪತ್ನಿಯ ಗೆಳೆಯನನ್ನ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮೃತನ ದೇಹವನ್ನ ಸೂಟ್​ಕೇಸ್​​ನಲ್ಲಿ ತುಂಬಿ ಗುಜರಾತ್​ ರಾಜ್ಯದ ಭರೂಚ್​​ನಲ್ಲಿ ಎಸೆಯಲಾಗಿತ್ತು ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ.

46 ವರ್ಷದ ನೀರಜ್​ ಗುಪ್ತಾ ಎಂಬ ಉದ್ಯಮಿ ತನ್ನ ಕಂಪನಿಯಲ್ಲೇ ಕೆಲಸಕ್ಕಿದ್ದ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ನವೆಂಬರ್​ 13ರಂದು ಮದುವೆ ವಿಚಾರವಾಗಿ ನೀರಜ್​ ಗುಪ್ತಾ, ವರ ಜುಬರ್​​, ಫೈಸಲ್ ಹಾಗೂ ತಾಯಿ ಶಾಹೀನ್​ ನಾಜ್​ ಜೊತೆ ಜಗಳ ಏರ್ಪಡಿತ್ತು.

ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ನಿಶ್ಚಿತ ವರ, ಉದ್ಯಮಿ ತಲೆಗೆ ಇಟ್ಟಿಗೆಯಿಂದ ಹೊಡೆದಿದ್ದಾನೆ. ಹಾಗೂ ಹೊಟ್ಟೆಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ. ಬಳಿಕ ಆತನ ಶವವನ್ನ ಸೂಟ್​ಕೇಸ್​ನಲ್ಲಿ ತುಂಬಿ ಎಸೆಯಲಾಗಿತ್ತು. ಗುಪ್ತಾ ಪತ್ನಿ ನೀಡಿದ ದೂರನ್ನ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...