ವಿಜಯವಾಡ ಕೊತ್ತಪೇಟೆ ಕೋಮಲ ವಿಲಾಸ ಕೇಂದ್ರದಲ್ಲಿರುವ ಪಾನ್ ಅಂಗಡಿಯೊಂದರ ಮಾಲೀಕ ಎರಡು ತಿಂಗಳ ಬಳಿಕ ಬಾಗಿಲು ತೆರೆದಿದ್ದು ಶಾಕ್ ಆಗಿದ್ದಾರೆ.
ಅಂಗಡಿಯಲ್ಲಿ ಇಟ್ಟಿದ್ದ ಹಣವನ್ನು ಗೆದ್ದಲು ಹುಳು ತಿಂದು ಹಾಕಿವೆ. ಪಾನ್ ಅಂಗಡಿ ಮಾಲೀಕ ಎರಡು ತಿಂಗಳ ನಂತರ ಲಾಕ್ಡೌನ್ ಸಡಿಲಿಕೆಯಾದ ಕಾರಣ ಅಂಗಡಿ ಬಾಗಿಲು ತೆರೆದು ಸ್ವಚ್ಛಗೊಳಿಸಲು ಮುಂದಾಗುತ್ತಿದ್ದಂತೆ ನೋಟಿನ ಕಂತೆಯನ್ನು ಗೆದ್ದಲು ತಿಂದಿರುವುದು ಗೊತ್ತಾಗಿದೆ.
ಹಣ ಸೇರಿದಂತೆ ಅಂಗಡಿಯಲ್ಲಿನ ಅನೇಕ ವಸ್ತುಗಳು ಗೆದ್ದಲು ಹಿಡಿದು ಹಾಳಾಗಿವೆ. ಇದರಿಂದಾಗಿ ಕಂಗಾಲಾದ ಮಾಲೀಕ ಕಣ್ಣೀರು ಹಾಕಿದ್ದಾರೆ. ಇದೇ ರೀತಿ ಹಲವರ ಅಂಗಡಿಗಳಲ್ಲಿಯೂ ಹಾನಿಯಾಗಿದೆ.