ಲಾಕ್ ಡೌನ್ ನಿಂದಾಗಿ ಪ್ರಾಣಿ ಪಕ್ಷಿಗಳ ಕಲರವ ಜೋರಾಗಿದೆ. ಕಾಡು ಪ್ರಾಣಿಗಳ ಓಡಾಟಗಳು ಸರಾಗವಾಗಿ ನಡೆದಿವೆ. ಅನೇಕ ಪ್ರಾಣಿಗಳು ಬೀದಿಯಲ್ಲಿ ಸುತ್ತುವ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದೆ.
ಗೋವಾದಲ್ಲಿರುವ ನೇತ್ರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಬುಧವಾರ ಕಪ್ಪು ಚಿರತೆ ಕಂಡುಬಂದಿದೆ. ಅದರ ಚಿತ್ರವನ್ನು ಅಲ್ಲಿನ ಮುಖ್ಯಮಂತ್ರಿ ಕೂಡ ಶೇರ್ ಮಾಡಿದ್ದಾರೆ. ನೆಟ್ಟಿಗರು ಈ ಚಿರತೆಯನ್ನು ಹಲವು ರೀತಿಯಲ್ಲಿ ವರ್ಣಿಸಿದ್ದಾರೆ.
ಪ್ರಸಿದ್ಧ ಜಂಗಲ್ ಬುಕ್ ನಲ್ಲಿ ಬರುವ ಭಗೀರನನ್ನು ಅನೇಕರು ನೆನಪಿಸಿಕೊಂಡು ಟ್ವೀಟಿಸಿದ್ದಾರೆ. ಪಾಪ್ ಕಲ್ಚರ್ ನ ಬಗ್ಗೆಯೂ ಚರ್ಚೆಗಳು ನಡೆದಿವೆ.