alex Certify ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ ಮಂದಿರ ನಿರ್ಮಾಣಕ್ಕೆ ನಟ ಅಕ್ಷಯ್​ ಕುಮಾರ್​ ದೇಣಿಗೆ: ಅಭಿಮಾನಿಗಳಿಗೂ ಕೊಡುಗೆ ನೀಡುವಂತೆ ಮನವಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ರಾಷ್ಟ್ರ ವ್ಯಾಪಿ ಚಾಲನೆ ನೀಡಿದ ಬಳಿಕ ಬಹಳಷ್ಟು ಮಂದಿ ತಮ್ಮ ಪಾಲಿನ ದೇಣಿಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ದೇಗುಲ ನಿರ್ಮಾಣಕ್ಕೆ ದೇಣಿಗೆ ನೀಡಿದ್ದು ಅಭಿಮಾನಿಗಳ ಬಳಿ ನೀವೂ ದೇಣಿಗೆ ನೀಡಿ ಅಂತಾ ಮನವಿ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗ್ತಾ ಇರೋದು ಬಹಳ ಸಂತೋಷಕರ ವಿಚಾರವಾಗಿದೆ. ಈಗ ಕೊಡುಗೆ ನೀಡೋದು ನಮ್ಮ ಸರದಿ. ನಾನು ದೇಣಿಗೆ ನೀಡಿದ್ದೇನೆ. ನೀವು ಕೂಡ ಇದರಲ್ಲಿ ಸೇರುತ್ತೀರಿ ಎಂದು ನಾನು ಭಾವಿಸುತ್ತೇನೆ. ಜೈ ಶ್ರೀರಾಮ್​ ಎಂದು ನಟ ಹೇಳಿದ್ದಾರೆ.

2020ರ ದೀಪಾವಳಿಯಂದು ಅಕ್ಷಯ್​ ಕುಮಾರ್​ ತಮ್ಮ ಮುಂಬರುವ ಚಿತ್ರ ರಾಮಸೇತು ಬಗ್ಗೆ ಘೋಷಣೆ ಮಾಡಿದ್ರು. ಅಭಿಷೇಕ್​ ಶರ್ಮಾ ನಿರ್ದೇಶನದ ಸಿನಿಮಾ ಇದಾಗಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ರನ್ನ ಭೇಟಿಯಾಗಿದ್ದ ಅಕ್ಷಯ್​ ಕುಮಾರ್​ ರಾಮ ಸೇತು ಸಿನಿಮಾ ಶೂಟಿಂಗ್​ನ್ನ ಅಯೋಧ್ಯೆಯಲ್ಲಿ ಮಾಡೋದ್ರ ಬಗ್ಗೆ ಚರ್ಚೆ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...