ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ರೈಲು ಹಾಗೂ ವಿಮಾನ ಹಾರಾಟ ಬಂದ್ ಆಗಿದ್ದ ಕಾರಣ ಜನರು ಇದ್ದಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇಂದು ವಿಮಾನ ಹಾರಾಟ ಶುರುವಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬಂದ ಮೊದಲ ವಿಮಾನ ಎಲ್ಲರ ಗಮನ ಸೆಳೆಯಿತು.
ಈ ವಿಮಾನದಲ್ಲಿ ವಿಹಾನ್ ಶರ್ಮಾ ಎಂಬ 5 ವರ್ಷದ ಬಾಲಕ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದ. ತಂದೆ-ತಾಯಿ ಜೊತೆ ದೆಹಲಿಯ ಅಜ್ಜನ ಮನೆಗೆ ಹೋಗಿದ್ದ ವಿಹಾನ್ ಲಾಕ್ ಡೌನ್ ಕಾರಣ ವಾಪಸ್ ಬರಲು ಆಗಿರಲಿಲ್ಲ. ಲಾಕ್ ಡೌನ್ ಗೂ ಮೊದಲೇ ತಂದೆ-ತಾಯಿ ಬೆಂಗಳೂರಿಗೆ ವಾಪಸ್ ಆಗಿದ್ದರು.
ಸತತ ಮೂರು ತಿಂಗಳು ದೆಹಲಿಯಲ್ಲಿದ್ದ ವಿಹಾನ್ ಇಂದು ತಾಯಿ ಮಡಿಲು ಸೇರಿದ್ದಾನೆ. ದೆಹಲಿಯಲ್ಲಿ ಏಕಾಂಗಿಯಾಗಿ ವಿಮಾನವೇರಿದ ವಿಹಾನ್ ಗೆ ತಾಯಿಯನ್ನು ಸೇರಲು ವಿಮಾನ ಸಿಬ್ಬಂದಿ ನೆರವಾಗಿದ್ದಾರೆ. ವಿಹಾನ್ ನೋಡಿ ಭಾವುಕರಾದ ತಾಯಿ ಅಪ್ಪಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡರು.