ಆಘಾತಕಾರಿ ಘಟನೆಯಲ್ಲಿ ಮೂರು ವರ್ಷದ ಬಾಲಕನ ಕೊಳವೆ ಬಾವಿಗೆ ಬಿದ್ದಿದ್ದು ಆತನನ್ನು ರಕ್ಷಿಸಲು ರಕ್ಷಣಾ ತಂಡಗಳಿಂದ ಹರಸಾಹಸ ನಡೆಸಲಾಗಿದೆ.
ತೆಲಂಗಾಣದ ಮೇದಕ್ ಜಿಲ್ಲೆಯ ಪಂಪಣ್ಣಪೇಟೆ ಮಂಡಲ ವ್ಯಾಪ್ತಿಯ ಪೊಡಿಚಂಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಗೋವರ್ಧನ್ ಎಂಬವರ ಜಮೀನಿನಲ್ಲಿ ಬೋರ್ವೆಲ್ ಕೊರೆಸಲಾಗಿದ್ದು ಆಟವಾಡುತ್ತಾ ಅಲ್ಲಿಗೆ ತೆರಳಿದ ಮೂರು ವರ್ಷದ ಸಾಯಿ ವರ್ಧನ್ ಬಿದ್ದಿದ್ದಾನೆ.
ಸುಮಾರು 120 ಅಡಿ ಆಳದಲ್ಲಿ ಆತ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಡಿಸ್ಟ್ರಿಕ್ಟ್ ಕಲೆಕ್ಟರ್ ಧರ್ಮ ರೆಡ್ಡಿ ಮತ್ತು ಪೊಲೀಸ್ ಅಧೀಕ್ಷಕರಾದ ಚಂದನ ದೀಪ್ತಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಾಲಕನಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ರಕ್ಷಣೆಗಾಗಿ ಸಮನಾಂತರ ಬಾವಿಯನ್ನು ತೋಡಲಾಗುತ್ತಿದ್ದು, ಸಮರೋಪಾದಿ ಕಾರ್ಯಾಚರಣೆ ನಡೆಸಲಾಗಿದೆ. ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.