ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಈ ಮಧ್ಯೆ ಬೇರೆ ರಾಜ್ಯ, ರಾಷ್ಟ್ರಗಳಿಂದ ತವರಿಗೆ ಬರ್ತಿರುವವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಡ್ತಿದೆ.
ದೆಹಲಿಯಿಂದ ಅಯೋಧ್ಯೆಗೆ ಬಂದ ಆಶಾ ದೇವಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಪತಿ ಸಾವನ್ನಪ್ಪಿದ್ದ. ಪತಿ ಸಾವಿನ ನಂತ್ರ ಮೂವರು ಮಕ್ಕಳ ಜೊತೆ ಆಶಾ ದೇವಿ ಅಯೋಧ್ಯೆಗೆ ಬಂದಿದ್ದಳು. ತವರಿಗೆ ವಾಪಸ್ ಆದ ಆಶಾ ದೇವಿಯನ್ನು ಕ್ವಾರಂಟೈನ್ ಮಾಡಿ ಪರೀಕ್ಷೆ ಮಾಡಲಾಗತ್ತು. ಈ ವೇಳೆ ಆಶಾದೇವಿಗೆ ಕೊರೊನಾ ಸೋಂಕಿರಿವುದು ಗೊತ್ತಾಗಿದೆ.
ಮಕ್ಕಳು ಸೇರಿದಂತೆ ಆಶಾ ದೇವಿಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಆಶಾದೇವಿ ಕಥೆ ಮಾತ್ರವಲ್ಲ. ಬೇರೆ ಊರಿನಿಂದ ತವರಿಗೆ ವಾಪಸ್ ಬಂದ ಅನೇಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲೂ ಕೊರೊನಾ ಸೋಂಕು ಹೆಚ್ಚಾಗಲು ಇದೇ ಕಾರಣವಾಗಿದೆ. ಮುಂಬೈ ಮೂಲ ಕೊರೊನಾ ಹೆಚ್ಚಳಕ್ಕೆ ಕಾರಣವಾಗಿದೆ.