alex Certify ಪತಿ-ಮಗನಿಗೆ ಕಚ್ಚಿದ್ದ ಹಾವಿನ ಮುಂದೆ ಅರಿಶಿನವಿಟ್ಟ ಪತ್ನಿ…..ಮುಂದೆ….!? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ-ಮಗನಿಗೆ ಕಚ್ಚಿದ್ದ ಹಾವಿನ ಮುಂದೆ ಅರಿಶಿನವಿಟ್ಟ ಪತ್ನಿ…..ಮುಂದೆ….!?

ಬಿಹಾರದ ದರಯಾಪುರ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಂದೆ-ಮಗನಿಗೆ ಹಾವು ಕಚ್ಚಿತ್ತು. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸುವ ಬದಲು ತಂತ್ರ-ಮಂತ್ರದ ಮೊರೆ ಹೋಗಿದ್ದಾರೆ. ಇದ್ರಿಂದ ತಂದೆ-ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದ್ರೆ ನಂತ್ರ ಗ್ರಾಮಸ್ಥರು ಮಾಡಿದ ಘಟನೆ ಆಘಾತ ತಂದಿದೆ.

ಚಿತೆ ಮೇಲೆ ಶವವಿಟ್ಟ ಮೇಲೆ ಗ್ರಾಮದ ಕೆಲ ಜನರು ತಾಂತ್ರಿಕನ ಹೆಸರು ಹೇಳಿದ್ದಾರೆ. ಹಾವು ಕಚ್ಚಿ ಸಾವನ್ನಪ್ಪಿದ ವ್ಯಕ್ತಿಯನ್ನು ಆತ ಬದುಕಿಸಬಲ್ಲ ಎಂದಿದ್ದಾರೆ. ತಕ್ಷಣ ಶವವನ್ನು ತೆಗೆದು ತಾಂತ್ರಿಕನ ಮನೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ಹಾವು ಹಿಡಿದು ತರುವಂತೆ ಆತ ಹೇಳಿದ್ದಾನೆ. ಕಚ್ಚಿದ್ದ ಹಾವನ್ನು ಹಿಡಿದು ತರಲಾಗಿದೆ. ಅರಿಶಿನ-ಕುಂಕುಮವನ್ನು ಹಾವಿನ ಮುಂದಿಟ್ಟು ಬೇಡಿಕೊಳ್ಳುವಂತೆ ಮೃತನ ಪತ್ನಿಗೆ ಕೇಳಲಾಗಿದೆ. ಪತ್ನಿ ಹಾಗೆ ಮಾಡಿದ್ದಾಳೆ. ಹಾವು ಅರಿಶಿನವನ್ನು ಮೂಸಿದೆ.

ತಕ್ಷಣ ಹಾವನ್ನು ಶವದ ಬಳಿ ತೆಗೆದುಕೊಂಡು ಹೋಗಲಾಗಿದೆ. ಹಾವು ಸತ್ತವರ ದೇಹದ ವಿಷ ತೆಗೆದು ಅವ್ರನ್ನು ಬದುಕಿಸುತ್ತೆ ಎಂದು ಜನರು ಕಾಯ್ತಿದ್ದರು ಎನ್ನಲಾಗಿದೆ. ಆದ್ರೆ ಹಾವು ಅಲ್ಲಿಂದ ಹೊರಡುವ ತಯಾರಿ ನಡೆದಿದೆ. ಇದ್ರಿಂದ ಕೋಪಗೊಂಡ ಜನರು ಹಾವನ್ನು ಕೊಂದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದ ಜನರ ಗುಂಪು ನೋಡಿ ವಾಪಸ್ ಹೋಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...