alex Certify SHOCKING NEWS: ಪತ್ನಿಯ ಅಕ್ರಮ ಸಂಬಂಧ; ಮನನೊಂದ ಪತಿ, ಫೇಸ್ ಬುಕ್ ಲೈವ್ ಗೆ ಬಂದು ಮಾಡಿದ್ದೇನು ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಪತ್ನಿಯ ಅಕ್ರಮ ಸಂಬಂಧ; ಮನನೊಂದ ಪತಿ, ಫೇಸ್ ಬುಕ್ ಲೈವ್ ಗೆ ಬಂದು ಮಾಡಿದ್ದೇನು ಗೊತ್ತಾ…..?

ವಿಜಯಪುರ: ಪ್ರೀತಿಸಿ ವಿವಾಹವಾಗಿದ್ದ ಪತ್ನಿ ತನ್ನ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ತಿಳಿಯುತ್ತಿದ್ದಂತೆ ಮನ ನೊಂದ ಪತಿ ನೇಣಿಗೆ ಕೊರಳೊಡ್ಡಿದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

25 ವರ್ಷದ ವೆಂಕಟೇಶ್ ದ್ವಾರನಹಳ್ಳಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ವೆಂಕಟೇಶ್ ಪತ್ನಿ ಆತನ ದಾಯಾದಿ ಸಹೋದರ ಶ್ರೀಶೈಲ್ ಎಂಬುವವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಮಾತ್ರವಲ್ಲ ಆತನೊಂದಿಗೇ ವಾಸವಾಗಿದ್ದಳು ಎನ್ನಲಾಗಿದೆ.

ಈ ಬಗ್ಗೆ ವೆಂಕಟೇಶ್ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆದರೆ ಪತ್ನಿ ತಾನು ವೆಂಕಟೇಶ್ ಜೊತೆ ಇರಲ್ಲ, ಪ್ರಿಯಕರ ಶ್ರೀಶೈಲ್ ಜೊತೆಯೇ ಇರುವುದಾಗಿ ಹೇಳಿಕೆ ನೀಡಿದ್ದಳು ಎನ್ನಲಾಗಿದೆ. ಪ್ರೀತಿಸಿ ವಿವಾಹವಾಗಿದ್ದ ಮಡದಿ ಬೇರೊಬ್ಬನೊಂದಿಗೆ ವಾಸವಾಗುದಾಗಿ ಹೇಳುತ್ತಿರುವುದನ್ನು ಕೇಳಿ ಮನನೊಂದ ವೆಂಕಟೇಶ್ ಫೇಸ್ ಬುಕ್ ಲೈವ್ ನಲ್ಲಿ ತನ್ನ ಸಂಕಟ ತೋಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಡಿಯೋ ನೋಡುತ್ತಿದ್ದಂತೆ ವೆಂಕಟೇಶ್ ಸ್ನೇಹಿತರು ಆತನನ್ನು ಹುಡುಕಿಕೊಂಡು ಬಂದಿದ್ದಾರೆ. ತನ್ನದೇ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವೆಂಕಟೇಶ್ ಸಾವಿಗೆ ಶರಣಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...