alex Certify ಈ ರಾಶಿಯವರಿಗಿದೆ ಇಂದು ʼಗುರುʼವಿನ ಅನುಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ʼಗುರುʼವಿನ ಅನುಗ್ರಹ

ಮೇಷ : ನಿಮ್ಮ ವಿಷಯದಲ್ಲಿ ಯಾರೋ ಮೂರನೆಯವರು ಮೂಗು ತೋರಿಸೋದು ಕಿರಿಕಿರಿ ತರಿಸಲಿದೆ. ಕುಲದೇವರ ಧ್ಯಾನ ಮಾಡೋದನ್ನ ಮರೆಯದಿರಿ.

ಶತ್ರು ಸೋತಿದ್ದಾನೆ ಎಂಬ ಭ್ರಮೆಯಲ್ಲಿ ಇರಬೇಡಿ. ತಾಳ್ಮೆಯಿಂದ ನೀವು ತೆಗೆದುಕೊಳ್ಳುವ ನಿರ್ಧಾರಗಳು ಆರ್ಥಿಕ ವ್ಯವಸ್ಥೆಯನ್ನ ಸುಧಾರಿಸುತ್ತದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ವೃಷಭ: ದೂರ ಪ್ರಯಾಣದ ಅವಕಾಶ ಕೂಡಿಬರಲಿದೆ. ರಾಜಕಾರಣಿಗಳಿಗೆ ಹೊಸ ಅವಕಾಶ ಸಿಗಲಿದೆ. ಸಕಾರಾತ್ಮಕ ನಿಲುವು ನಿಮ್ಮ ಭವಿಷ್ಯವನ್ನ ಸುಧಾರಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರಲಿದೆ. ಕೈಗೆ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಂಡಲ್ಲಿ ಲಾಭ ಕಾದಿದೆ. ಸುಬ್ರಹ್ಮಣ್ಯನನ್ನ ಪ್ರಾರ್ಥಿಸಿ.

ಮಿಥುನ: ಕಚೇರಿ ಕೆಲಸದಲ್ಲಿ ಕಿರಿಕಿರಿ ಕಾದಿದೆ. ನಿಮಗೆ ಆಗದವರು ನಿಮ್ಮ ವಿರುದ್ಧ ದೊಡ್ಡ ಷಡ್ಯಂತ್ರವನ್ನೇ ಹೂಡಬಹುದು. ಯಾರ ಟೀಕೆಗೂ ಜಗ್ಗದೇ ನಿಮ್ಮ ಪ್ರಯತ್ನವನ್ನ ಮುಂದುವರಿಸಿ. ವಾತಾವರಣ ಸರಿಯಿಲ್ಲದ ಕಾರಣ ಹೊರಗಿನ ಆಹಾರದಿಂದ ಅಂತರ ಕಾಯ್ದುಕೊಳ್ಳಿ. ದಿಢೀರ್​ ಪ್ರವಾಸ ಕೈಗೊಳ್ಳುವ ಅವಕಾಶ ನಿಮ್ಮದಾಗಲಿದೆ.

ಕಟಕ: ಮೋಸದ ದಾರಿಯಲ್ಲಿ ಹಣ ಸಂಪಾದಿಸುವ ಮಾರ್ಗ ನಿಮ್ಮ ಕಣ್ಮುಂದೆ ಇದ್ದರೂ ಸಹ ಈ ದುಸ್ಸಾಹಸಕ್ಕೆ ಕೈ ಹಾಕಲೇಬೇಡಿ. ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ಮನೆಯ ಕಿರಿಯ ಸದಸ್ಯರಿಂದ ಶುಭ ಸುದ್ದಿಯನ್ನ ಕೇಳಲಿದ್ದೀರಿ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಎಲ್ಲಾ ಪರಿಸ್ಥಿತಿಯಲ್ಲೂ ತಾಳ್ಮೆ ಕಾಯ್ದುಕೊಳ್ಳಿ.

ಸಿಂಹ: ಎಂತಹ ಕಷ್ಟದ ಸನ್ನಿವೇಶದಲ್ಲೂ ಸಂಗಾತಿ ನೀಡುವ ಧೈರ್ಯ ಆತ್ಮಸ್ಥೈರ್ಯವನ್ನ ಹೆಚ್ಚಿಸಲಿದೆ. ನೀವು ಯಶಸ್ಸನ್ನ ಪಡೆದ ಕಾರ್ಯದಲ್ಲೂ ಕೆಲವರು ತಪ್ಪನ್ನು ಹುಡುಕಲಿದ್ದಾರೆ. ಆದರೆ ಇದಕ್ಕೆಲ್ಲ ಕಿವಿಗೊಡಬೇಡಿ. ಕುಲದೇವರನ್ನ ಸ್ಮರಿಸಿ. ಕಪ್ಪು ಬಣ್ಣದ ವಸ್ತ್ರವನ್ನ ಧರಿಸದಿರಿ. ಶತ್ರು ಸೋತು ಶರಣಾಗಿದ್ದಾರೆ ಎಂಬ ನಿರ್ಲಕ್ಷ್ಯ ಬೇಡ.

ಕನ್ಯಾ: ಮನೆಯಲ್ಲಿ ಶುಭ ಕಾರ್ಯಕ್ಕೆ ಅವಕಾಶ ಕೂಡಿಬರಲಿದೆ. ಆಸ್ತಿ ವ್ಯಾಜ್ಯ ಹೊಸ ತಿರುವನ್ನೇ ಪಡೆದುಕೊಳ್ಳಬಹುದು. ಎರಡು ದೋಣಿಗಳ ಮೇಲೆ ಪಯಣಿಸುವ ಸಾಹಸ ಬೇಡ. ಸಂಗಾತಿ ನೀಡುವ ಸಲಹೆಗಳಿಗೆ ಬೆಲೆ ನೀಡಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಗಣಪತಿ ಸ್ತ್ರೋತ್ರ ಪಠನೆಯಿಂದ ಶುಭವಾಗಲಿದೆ.

ತುಲಾ: ನಿಮ್ಮ ತೂಕದ ಮಾತು ದೊಡ್ಡ ದೊಡ್ಡ ವಿವಾದಗಳಿಗೆ ನಾಂದಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಯಾರೋ ಏನೋ ಅಂದರು ಎಂಬ ಒಂದೇ ಕಾರಣಕ್ಕೆ ವಿಚಲಿತರಾಗೋದು ಬೇಡ. ಕಂಕಣ ಭಾಗ್ಯ ಕೂಡಿ ಬರಲಿದೆ. ಸಿಕ್ಕ ಅವಕಾಶ ಬಾಚಿಕೊಂಡಲ್ಲಿ ಖಂಡಿತ ಲಾಭ ಕಾದಿದೆ. ಮರಳಿ ಯತ್ನವ ಮಾಡಿ ಎಂಬ ಮಾತಿನಲ್ಲಿ ನಂಬಿಕೆ ಇಡಿ.

ವೃಶ್ಚಿಕ: ಜಾಣರಾಗಿದ್ದರೂ ನಿಮ್ಮ ಜಾಣತನ ಎಲ್ಲಾ ಕಡೆ ಕೆಲಸ ಮಾಡುತ್ತೆ ಎಂಬ ಹುಂಬತನ ಬೇಡ. ರಾಜಕಾರಣಿಗಳು, ಉದ್ಯಮಿಗಳು, ವೈದ್ಯರು ಹಾಗೂ ಇಂಜಿನಿಯರ್ಸ್​ಗೆ ನಿಮ್ಮ ವೃತ್ತಿ ರಂಗದಲ್ಲಿ ಯಶಸ್ಸು ಕಾದಿದೆ. ವಿದ್ಯಾರ್ಥಿಗಳ ಬಹುದಿನದ ಕನಸು ನನಸಾಗಲಿದೆ. ಹಿರಿಯರ ಜೊತೆ ವಾದ ಮಾಡುವ ಸಂದರ್ಭ ಬರಲೂಬಹುದು.

ಧನಸ್ಸು: ಸ್ನೇಹಿತರ ಸಲಹೆಯನ್ನ ಕೇಳಿ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಕುಟುಂಬಸ್ಥರ ಮನಸ್ಸಿಗೆ ನೋವುಂಟು ಮಾಡಬೇಡಿ. ಧನಾಗಮನವಿದೆ. ಹಳೆಯ ಯಾವುದೋ ಆಸ್ತಿ ವ್ಯಾಜ್ಯ ಮತ್ತೊಮ್ಮೆ ಕಿರಿಕಿರಿ ಉಂಟು ಮಾಡಬಹುದು. ಮನೆಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಿರೀಕ್ಷಿತ ಅತಿಥಿ ಆಗಮನದ ನಿರೀಕ್ಷೆ ಇದೆ.

ಮಕರ: ಕೆಲಸದಲ್ಲಿನ ನಿಮ್ಮ ಶ್ರದ್ಧೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬರಲಿದೆ. ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸಿ. ಕುಲದೇವರ ಆರಾಧನೆ ಮಾಡಿ.  ದೂರದ ಪ್ರಯಾಣದ ಅವಕಾಶವಿದೆ. ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆಯನ್ನಿಡಿ. ಶಾಂತತೆಯನ್ನ ಕಾಯ್ದುಕೊಳ್ಳಿ. ಅನಿರೀಕ್ಷಿತ ಜವಾಬ್ದಾರಿಯೊಂದು ನಿಮ್ಮ ಹೆಗಲೇರಬಹುದು.

ಕುಂಭ: ಪ್ರಿತಾರ್ಜಿತ ಆಸ್ತಿ ವಿಚಾರದಲ್ಲಿ ಉಂಟಾಗಿದ್ದ ಕುಟುಂಬ ಕಲಹ ನಿವಾರಣೆಯಾಗಲಿದೆ. ಎಲ್ಲರೂ ನಮ್ಮವರು ಎಂಬ ತಪ್ಪು ಕಲ್ಪನೆಯಿಂದ ಹೊರಬನ್ನಿ. ಸಂಕಟ ಬಂದಾಗ ವೆಂಕಟರಮಣ ಅನ್ನೋ ಮನೋಭಾವ ಬೇಡ. ತಾಳ್ಮೆಯಿದ್ದಲ್ಲಿ ಲಾಭವಿದೆ. ಕಚೇರಿ ಕೆಲಸದಲ್ಲಿ ಪ್ರತಿಸ್ಪರ್ಧಿ ನಿಮ್ಮನ್ನ ಹಿಮ್ಮೆಟ್ಟಿಸುವ ಸಾಧ್ಯತೆ ಇದೆ.

ಮೀನ: ವೃತ್ತಿರಂಗದಲ್ಲಿ ಹೊಸ ಜವಾಬ್ದಾರಿಯೊಂದು ನಿಮ್ಮ ಹೆಗಲೇರಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಆತುರ ಬೇಡ. ಸಂಗಾತಿಯ ಜೊತೆ ಕಿರಿಕಿರಿ ಉಂಟಾಗಲಿದೆ. ಗೃಹದೋಷ ಸಮಸ್ಯೆ ಎದುರಾಗಲಿದೆ. ಕುಟುಂಬ ಸದಸ್ಯರು ನೀಡುವ ಸಲಹೆಗಳನ್ನ ಕೇಳಿಸಿಕೊಳ್ಳಿ. ಆಂಜನೇಯನನ್ನ ಪ್ರಾರ್ಥಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...