alex Certify ಈ ರಾಶಿಯವರಿಗಿದೆ ಇಂದು ಅಂದುಕೊಂಡ ಕಾರ್ಯದಲ್ಲಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ಅಂದುಕೊಂಡ ಕಾರ್ಯದಲ್ಲಿ ಜಯ

ಮೇಷ : ವ್ಯವಹಾರದಲ್ಲಿ ನಿಮ್ಮ ಸಣ್ಣ ಅಜಾಗರೂಕತೆಯು ದೊಡ್ಡ ಮಟ್ಟದಲ್ಲಿ ನಷ್ಟ ತಂದಿಡಬಹುದು. ಹೀಗಾಗಿ ಆದಷ್ಟು ಜಾಗ್ರತರಾಗಿರಿ. ಮಕ್ಕಳು ಓದಿನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ. ಇದರಿಂದ ಪೋಷಕರು ಸಂತಸಗೊಳ್ಳಲಿದ್ದಾರೆ.

ವೃಷಭ : ನೀವು ಮಾಡದ ತಪ್ಪಿಗೆ ಅಪಮಾನ ಎದುರಿಸಬೇಕಾಗಿ ಬರಬಹುದು. ಇದು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಲಿದೆ. ಸ್ನೇಹಿತರೊಂದಿಗೆ ನಿಮ್ಮ ನೋವನ್ನು ಹೇಳಿಕೊಳ್ಳುವಿರಿ. ಕೃಷಿಕರಿಗೆ ಲಾಭ ಸಿಗಲಿದೆ. ಉದ್ಯಮಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ.

ಮಿಥುನ : ಕಚೇರಿ ಕೆಲಸಗಳಲ್ಲಿ ಸಹೋದ್ಯೋಗಿಗಳು ನಿಮ್ಮ ಬೆನ್ನಹಿಂದೆ ಪಿತೂರಿ ಮಾಡುತ್ತಿರೋದ್ರಿಂದ ಸಂಕಷ್ಟ ಎದುರಾದೀತು. ಎಚ್ಚರಿಕೆಯಿಂದಿರಿ. ಸರ್ಕಾರಿ ನೌಕರರಿಗೆ ಕೊಂಚ ಕಿರಿಕಿರಿಯಿದೆ. ಕುಟುಂಬಸ್ಥರ ಜೊತೆ ಉತ್ತಮ ಸಮಯ ಕಳೆಯುವಿರಿ.

ಕಟಕ : ಜವಳಿ ಉದ್ಯಮಿಗಳಿಗೆ ಇಂದು ಲಾಭವಿದೆ. ವೈದ್ಯಕೀಯ ವೃತ್ತಿಯವರಿಗೆ ಇಂದು ಕೆಲಸ ಒತ್ತಡಮಯವಾಗಿ ಇರಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಇನ್ನಷ್ಟು ಗಮನ ಹರಿಸಲೇಬೇಕು. ನವ ವಿವಾಹಿತರಿಗೆ ಸಂತಾನ ಭಾಗ್ಯವಿದೆ. ಮನೆಯ ಕಿರಿಯ ಪುತ್ರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಸಿಂಹ : ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸುವಿರಿ. ಸಹೋದ್ಯೋಗಿಗಳ ಸಹಾಯ ಪಡೆಯದೇ ನಿಮ್ಮ ಸ್ವಂತ ಶಕ್ತಿಯನ್ನು ನಂಬಿ ಕೆಲಸ ಮಾಡಿ. ಸ್ತ್ರೀಯರಿಗೆ ಕಿರಿಕಿರಿ ಉಂಟಾಗುವ ಸಾಕಷ್ಟು ಪ್ರಸಂಗಗಳು ಎದುರಾಗಲಿದೆ.

ಕನ್ಯಾ : ನೀವು ಅತಿಯಾಗಿ ನಂಬಿದವರೇ ಇಂದು ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಆತುರದ ನಿರ್ಧಾರ ಭಾರೀ ನಷ್ಟ ತಂದೊಡ್ಡಬಹುದು. ಕುಲದೇವತೆಯನ್ನು ಪ್ರಾರ್ಥಿಸಿ. ಒಳಿತಾಗಲಿದೆ.

ತುಲಾ : ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಉಂಟಾಗಲಿದೆ. ಇಷ್ಟವಿಲ್ಲದವರ ಜೊತೆ ಅನಿವಾರ್ಯವಾಗಿ ಮಾತನಾಡಬೇಕಾದ ಸಂದರ್ಭ ಎದುರಾಗಬಹುದು. ತಾಯಿಯ ಆರೋಗ್ಯ ಹದಗೆಡಲಿದೆ. ವಿದ್ಯಾರ್ಥಿಗಳಿಗೆ ಶುಭ ಸುದ್ದಿಯಿದೆ.

ವೃಶ್ಚಿಕ : ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಿಮ್ಮ ಗುಣ ಪೋಷಕರ ಅಸಮಾಧಾನಕ್ಕೆ ಕಾರಣವಾಗಬಹುದು. ಉದ್ಯೋಗದಲ್ಲಿಯೂ ಕಿರಿಕಿರಿ ಅನುಭವಿಸುವಿರಿ. ಹಳೆಯ ಸಾಲಗಳು ತೀರಲಿವೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿಕೊಳ್ಳಿ.

ಧನು : ವಿದ್ಯಾರ್ಥಿಗಳು ಅತಿಯಾದ ಗೊಂದಲಕ್ಕೆ ಒಳಗಾಗುತ್ತಿದ್ದೀರಿ. ಹೀಗಾಗಿ ಗುರುಗಳಿಂದ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ. ಹೊಸದೊಂದು ಉದ್ಯಮ ನಡೆಸುವ ಬಗ್ಗೆ ಸಂಗಾತಿಯ ಜೊತೆ ಚರ್ಚೆ ನಡೆಸುವಿರಿ. ಸಂಗಾತಿ ನಿಮ್ಮೆಲ್ಲ ಸಾಹಸಕ್ಕೆ ಸಾಥ್​ ನೀಡಲಿದ್ದಾರೆ.

ಮಕರ : ಕುಟುಂಬದಲ್ಲಿ ಎಲ್ಲಾ ಜವಾಬ್ದಾರಿಗಳನ್ನು ಹೊರುವಲ್ಲಿ ಯಶಸ್ವಿಯಾಗುವಿರಿ. ವಿದ್ಯಾರ್ಥಿಗಳ ಚಂಚಲ ಬುದ್ಧಿ ಮಾರಕ ಎನಿಸಬಹುದು. ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಕುಂಭ : ಹಣಕಾಸಿನ ವಿಚಾರದಲ್ಲಿ ಅನಿವಾರ್ಯವಾಗಿ ಇನ್ನೊಬ್ಬರ ಸಹಾಯ ಬೇಡುವ ಪರಿಸ್ಥಿತಿ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಒಳಿತಾಗಲಿದೆ. ಕಷ್ಟದ ದಿನಗಳಲ್ಲಿ ಜನರ ನಿಜ ಬಣ್ಣ ತಿಳಿಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮೀನ : ಸಂಗಾತಿಯ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಅಪೂರ್ಣ ನಿರ್ಣಯಗಳು ಉದ್ಯಮದಲ್ಲಿ ನಷ್ಟ ಉಂಟಾಗುವಂತೆ ಮಾಡಲಿದೆ. ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಗಣ್ಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...