alex Certify ಈ ರಾಶಿಯವರಿಗೆ ಇಂದು ಭೂ ವ್ಯವಹಾರಗಳಲ್ಲಿ ಕಾದಿದೆ ಲಾಭ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇಂದು ಭೂ ವ್ಯವಹಾರಗಳಲ್ಲಿ ಕಾದಿದೆ ಲಾಭ…..!

ಮೇಷ : ಪ್ರತಿಭಾವಂತರಿಗೆ ವಿಶೇಷವಾದ ಗೌರವ ಸಿಗಲಿದೆ. ವಿದ್ಯಾರ್ಥಿಗಳು ಇನ್ನಷ್ಟು ಶ್ರಮ ಪಡಬೇಕಾಗಿ ಬರಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಸ್ನೇಹಿತರೊಂದಿಗೆ ನಿಮ್ಮ ಕಷ್ಟದ ಸಂದರ್ಭಗಳನ್ನು ಹಂಚಿಕೊಳ್ಳಲಿದ್ದೀರಿ.

ವೃಷಭ : ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ಇಂದು ಧನಲಾಭವಿದೆ. ಕ್ಯಾಟರಿಂಗ್​ ಕೆಲಸ ಮಾಡುವವರಿಗೂ ಇಂದು ಹೊಸ ಆರ್ಡರ್​ಗಳು ಸಿಗಲಿದೆ. ವಿದ್ಯಾರ್ಥಿಗಳು ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದೇ ಕೊಂಚ ಕಿರಿಕಿರಿ ಅನುಭವಿಸಲಿದ್ದಾರೆ. ಮನೆಯಲ್ಲಿ ಚಿನ್ನದ ಆಭರಣ ಖರೀದಿ ಮಾಡಲಿದ್ದೀರಿ.

ಮಿಥುನ : ಬಂಗಾರ ಆಭರಣ ತಯಾರಿಕರಿಗೆ ಬೇಡಿಕೆ ಹೆಚ್ಚಲಿದೆ. ಪೂರ್ವಿಕರ ಆಸ್ತಿ ಪಾಲು ವಿಚಾರದಲ್ಲಿ ನಿಮಗೆ ಅನ್ಯಾಯವಾಗಲಿದೆ. ಇದರಿಂದ ನೀವು ನೊಂದುಕೊಳ್ಳುವಿರಿ. ಕಲಾವಿದರು ಇನ್ಮೇಲೆ ಒಳ್ಳೆಯ ದಿನಗಳನ್ನೇ ನೋಡಲಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಕಟಕ : ತೋಟಗಾರಿಕಾ ಉದ್ಯಮದಲ್ಲಿ ಇರುವವರಿಗೆ ಇಂದು ಧನಲಾಭವಿದೆ. ನಟನಾ ವೃತ್ತಿಯಲ್ಲಿ ಇರುವವರಿಗೆ ಸರಿಯಾದ ಸಮಯಕ್ಕೆ ಸಂಭಾವನೆ ಸಿಗಲಿದೆ. ಅಡ್ಡ ಮಾರ್ಗದಲ್ಲಿ ಹಣ ಮಾಡಲು ಹೋಗಿ ನೀವೇ ಪಜೀತಿಗೆ ಸಿಲುಕುವ ಸಾಧ್ಯತೆ ಇದೆ.

ಸಿಂಹ : ಪೋಷಕರ ಜೊತೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಲಿದ್ದೀರಿ. ಕ್ರೀಡಾಪಟುಗಳು ಹಂತಹಂತವಾಗಿ ಮೇಲೇರಲಿದ್ದಾರೆ. ಪೋಷಕರು ನಡೆಸಿಕೊಂಡು ಬರುತ್ತಿದ್ದ ವ್ಯವಹಾರದ ಯಜಮಾನಿಕೆಯು ನಿಮ್ಮ ಕೈ ಸೇರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ.

ಕನ್ಯಾ : ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಕೃಷಿಕರಿಗೆ ಇಂದು ಉತ್ತಮ ಲಾಭವಿದೆ. ನಿಮ್ಮ ಮೇಲೆ ಬಂದಿದ್ದ ದೊಡ್ಡ ಅಪವಾದದಿಂದ ಇಂದು ದೋಷಮುಕ್ತರಾಗಲಿದ್ದೀರಿ. ಕೋರ್ಟ್​ ಕಚೇರಿ ನಿಮಗೆ ಜಯವಿದೆ.

ತುಲಾ : ಧಾರ್ಮಿಕ ಕಾರ್ಯಗಳನ್ನು ನಡೆಸುವ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸಲಿದ್ದೀರಿ. ರಾಜಕೀಯ ರಂಗದಲ್ಲಿ ಇರುವವರು ಸಾರ್ವಜನಿಕ ಜೀವನದಲ್ಲಿ ಮನ್ನಣೆಗೆ ಪಾತ್ರರಾಗಲಿದ್ದಾರೆ. ರಿಯಲ್​ ಎಸ್ಟೇಟ್​ ಉದ್ಯಮಿಗಳು ಇಂದು ಲಾಭದಲ್ಲಿ ಇರಲಿದ್ದಾರೆ.

ವೃಶ್ಚಿಕ : ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆಗಳನ್ನು ಪಡೆಯಲಿದ್ದೀರಿ. ಮಕ್ಕಳ ಅತಿಯಾದ ಸಿಟ್ಟಿನ ಸ್ವಭಾವ ನಿಮ್ಮ ಮನಸ್ಸಿಗೆ ಘಾಸಿಯುಂಟು ಮಾಡಲಿದೆ. ಆದಷ್ಟು ಖರ್ಚಿಗೆ ಕಡಿವಾಣ ಹಾಕಿ. ವ್ಯವಹಾರಗಳಲ್ಲಿ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ. ಎಚ್ಚರಿಕೆಯಿಂದಿರಿ.

ಧನು : ಹಿರಿಯರ ಕೋಪಕ್ಕೆ ಗುರಿಯಾಗುವಂತಹ ಕೆಲಸ ಮಾಡುವಿರಿ. ಇದರಿಂದ ನಿಮಗೆ ಮುಜುಗರ ಉಂಟಾಗಲಿದೆ. ಭೂ ವ್ಯವಹಾರಗಳ ವಿಚಾರದಲ್ಲಿ ಮಧ್ಯವರ್ತಿಯಿಂದ ಮೋಸಕ್ಕೆ ಒಳಗಾಗುವ ಸಾಧ್ಯತೆ ಇದೆ. ಧಾನ್ಯಗಳ ವ್ಯಾಪಾರಿಗಳಿಗೆ ಹಣದ ವಿಚಾರದಲ್ಲಿ ಮೋಸ ಉಂಟಾಗಲಿದೆ.

ಮಕರ : ಒಂದೆಡೆ ಸಾಲ ತೀರಿಸಲು ಹೋಗಿ ಇನ್ನೊಂದೆಡೆ ಸಾಲ ಮಾಡುತ್ತಿದ್ದೀರಿ. ಈ ಅಭ್ಯಾಸ ಮುಂದೊಂದು ದಿನ ನಿಮಗೆ ದೊಡ್ಡ ಮಟ್ಟದ ಪಾಶ ತಂದೊಡ್ಡುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳು ಹೇಳಿಕೆಗಳನ್ನು ನೀಡುವ ಮುನ್ನ ಎಚ್ಚರಿಕೆಯಿಂದಿರಿ. ಆಸ್ತಿ ಖರೀದಿಗೆ ಇದು ಸಕಾಲವಲ್ಲ.

ಕುಂಭ : ಪ್ರೀತಿ – ಪ್ರೇಮದ ವಿಚಾರದಲ್ಲಿ ಕುಟುಂಬಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಲಾಭವಿದೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ಇದೆ.

ಮೀನ : ರಾಜಕೀಯ ನಾಯಕರಿಗೆ ವಿರೋಧಿಗಳಿಂದ ದೊಡ್ಡ ಕಷ್ಟ ಎದುರಾಗಲಿದೆ. ಭೂ ವ್ಯವಹಾರಗಳಲ್ಲಿ ನಿಮಗೆ ಜಯ ಪ್ರಾಪ್ತಿಯಾಗಲಿದೆ. ಬೆನ್ನು ನೋವಿನ ಸಮಸ್ಯೆಯಿರುವವರು ಎಚ್ಚರಿಕೆಯಿಂದಿರಿ. ಹೈನುಗಾರಿಕೆ ಉದ್ಯಮಿಗಳಿಗೆ ಇಂದು ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...