alex Certify ಈ ರಾಶಿಯವರಿಗೆ ಇದೆ ಇಂದು ಆಸ್ತಿ ಖರೀದಿ ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ಆಸ್ತಿ ಖರೀದಿ ಯೋಗ

ಮೇಷ: ಆಸ್ತಿ ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ.

ಗುತ್ತಿಗೆ ಕೆಲಸ ಮಾಡುವವರು ಇಂದು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಅತಿಯಾದ ಖರ್ಚು ಒಳ್ಳೆಯದಲ್ಲ. ವಿದ್ಯಾರ್ಥಿಗಳು ಪ್ರಯತ್ನ ಮುಂದುವರಿಸಿ.

ವೃಷಭ : ಮಿತಿ ಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲವಾದಲ್ಲಿ ಕಷ್ಟ ತಪ್ಪಿದ್ದಲ್ಲ. ಈ ದಿನ ದೂರ ಪ್ರಯಾಣ ಮಾಡಲು ಯೋಗ್ಯವಾಗಿಲ್ಲ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಇದೆ. ಕೌಟುಂಬಿಕ ಸಮಸ್ಯೆಗಳು ಒಂದೊಂದೆ ಪರಿಹಾರವಾಗಲಿದೆ.

ಮಿಥುನ : ಮಕ್ಕಳು ವಿದ್ಯಾಭ್ಯಾಸದಲ್ಲಿ ಕಡಿಮೆ ಲಕ್ಷ್ಯ ತೋರಲಿದ್ದಾರೆ. ಪೋಷಕರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಕಲಹ ಉಂಟಾಗಬಹುದು.

ಕಟಕ : ನಿಮ್ಮ ಅನಾರೋಗ್ಯ ಸಮಯದಲ್ಲಿ ಸಂಗಾತಿಯು ಒಳ್ಳೆಯ ಆರೈಕೆ ಮಾಡಲಿದ್ದಾರೆ, ಇದರಿಂದ ನಿಮಗೆ ಚೇತರಿಕೆ ಇನ್ನಷ್ಟು ಸುಲಭ ಎನಿಸಲಿದೆ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಲಿದ್ದೀರಿ.

ಸಿಂಹ : ದಾಂಪತ್ಯ ಜೀವನದಲ್ಲಿನ ಬಿರುಕುಗಳು ಮರೆಯಾಗಿ ಒಮ್ಮತ ಮೂಡಲಿದೆ. ಅನಿವಾರ್ಯ ಕಾರಣಕ್ಕೆ ಮನೆಯಿಂದ ದೂರ ಉಳಿಯಬೇಕಾದ ಪ್ರಸಂಗ ಎದುರಾಗಲಿದೆ. ಕ್ರೀಡಾಪಟುಗಳಿಗೆ ಈ ದಿನ ಶುಭ ದಿನವಾಗಿದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಇರಲಿದೆ.

ಕನ್ಯಾ : ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು. ಸಂಶೋಧಕರಿಗೆ ಉತ್ತಮ ಮಾರ್ಗದರ್ಶನ ಲಭಿಸಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಅನಿವಾರ್ಯ ಕಾರಣಗಳಿಂದ ದೂರ ಪ್ರಯಾಣ ಮಾಡುವಿರಿ.

ತುಲಾ : ಪುತ್ರನ ಉನ್ನತ ವ್ಯಾಸಂಗಕ್ಕಾಗಿ ದೊಡ್ಡ ಮಟ್ಟದ ಖರ್ಚು ಮಾಡಬೇಕಾಗಿ ಬರಲಿದೆ. ವಿದೇಶ ಪ್ರಯಾಣ ಯೋಗವಿದೆ. ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ಇದರಿಂದ ನಿಮ್ಮ ವರ್ಚಸ್ಸು ಸಹ ಹೆಚ್ಚಲಿದೆ.

ವೃಶ್ಚಿಕ : ಇಂದು ನಿಮ್ಮ ಮನೆಗೆ ಅನಿರೀಕ್ಷಿತ ಅತಿಥಿಯ ಆಗಮನವಿದೆ. ಮನೆಯಲ್ಲಿ ಶುಭ ಕಾರ್ಯ ಸಾಂಗವಾಗಿ ನೆರವೇರಲಿದೆ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇದ್ದಷ್ಟು ಒಳ್ಳೆಯದು. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಧನು : ವಕೀಲರಿಗೆ ಇಂದು ಧನಾಗಮನವಿದೆ. ಉದ್ಯಮಿಗಳು ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ವಿದೇಶಿ ಗ್ರಾಹಕರಿಂದ ಒಳ್ಳೆಯ ಲಾಭವಿದೆ. ವೈವಾಹಿಕ ಸಂಬಂಧಕ್ಕೆ ಅರಸುತ್ತಿರುವವರಿಗೆ ಶುಭ ಯೋಗವಿದೆ.

ಮಕರ : ಧಾರ್ಮಿಕ ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಹಣವನ್ನು ದಾನ ಮಾಡಲಿದ್ದೀರಿ. ಇದು ನಿಮ್ಮ ಪೋಷಕರಿಗೆ ಖುಷಿ ಕೊಡುವ ವಿಚಾರವಾಗಿದೆ. ಹೊಸ ಸ್ನೇಹಿತರ ಪರಿಚಯದಿಂದ ನಿಮ್ಮ ಜೀವನ ಬದಲಾಗಿದೆ. ಅನಗತ್ಯ ಜಗಳಗಳಿಗೆ ಮೂಗು ತೂರಿಸಲು ಹೋಗಬೇಡಿ.

ಕುಂಭ : ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಇಂದು ಬಡ್ತಿ ಭಾಗ್ಯವಿದೆ. ಮಕ್ಕಳು ಓದಿನಲ್ಲಿ ಮುಂದುವರಿಯಲಿದ್ದಾರೆ. ಸಂಗಾತಿಯ ಆರೋಗ್ಯವು ಕೆಡಲಿದೆ. ಇದರಿಂದ ನೀವು ಚಿಂತೆಗೆ ಒಳಗಾಗುವಿರಿ. ಕಲಾವಿದರಿಗೆ ಉತ್ತಮ ಅವಕಾಶಗಳು ಕೂಡಿ ಬರಲಿದೆ.

ಮೀನ : ಕಚೇರಿ ಕೆಲಸಗಳಿಗೆ ಆದ್ಯತೆ ನೀಡಲು ಹೋಗಿ ಕುಟುಂಬದ ಕಡೆಗೆ ಲಕ್ಷ್ಯ ನೀಡಲು ಸಾಧ್ಯವಾಗದೇ ಹೋಗಬಹುದು. ಯಾವುದೇ ಮಹಾನ್​ ಕಾರ್ಯ ಮಾಡುವ ಮುನ್ನ ಸ್ನೇಹಿತರ ಅಭಿಪ್ರಾಯ ಕೇಳಲಿದ್ದೀರಿ. ನಿಮ್ಮ ಅತಿಯಾದ ಕೋಪವು ಕುಟುಂಬಸ್ಥರನ್ನು ನಿಮ್ಮಿಂದ ದೂರ ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...