alex Certify ಆತ್ಮಹತ್ಯೆಗೆ ಶರಣಾದ ಯುವಕ: ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಕೊಠಡಿ ಧ್ವಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಶರಣಾದ ಯುವಕ: ಆಕ್ರೋಶಗೊಂಡ ಕುಟುಂಬಸ್ಥರಿಂದ ಆಸ್ಪತ್ರೆ ಕೊಠಡಿ ಧ್ವಂಸ

25 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಪಂಚಕುಲ ಜಿಲ್ಲೆಯ ಖಡಕ್​ ಮಂಗೋಲಿಯಲ್ಲಿ ನಡೆದಿದೆ. ಅವತಾರ್​ ಎಂಬ ಯುವಕ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದನು. ಕೂಡಲೇ ಆತನ ಮನೆಯವರು ಸೆಕ್ಟರ್​ 6ರಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆದರೆ ಅವತಾರ್​ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡುತ್ತಿದ್ದಂತೆಯೇ ಅವತಾರ್ ಕುಟುಂಬಸ್ಥರು ಗದ್ದಲ ಶುರುವಿಟ್ಟಿದ್ದಾರೆ ಮಾತ್ರವಲ್ಲದೇ ವೈದ್ಯರ ಕ್ಯಾಬಿನ್​ನ ಕಿಟಕಿ ಗಾಜುಗಳನ್ನು ಮುರಿದು ಹಾಕಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಪಂಚಕುಲಾ ಜಿಲ್ಲೆಯ ಸೆಕ್ಟರ್​ 7ರ ಪೊಲೀಸರು ಆಸ್ಪತ್ರೆಗೆ ಧಾವಿಸಿದ್ದಾರೆ. ಮೃತ ಅವತಾರ್​ ನಿವಾಸ ಕೂಡ ಸೆಕ್ಟರ್​ 7 ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿಯೇ ಬರುತ್ತದೆ.

ಅವತಾರ್​ ಸಾವಿನ ಬಳಿಕ ಆಕ್ರೋಶಗೊಂಡ ಕುಟುಂಬ ಸದಸ್ಯರು ಎಮೆರ್ಜೆನ್ಸಿ ವಾರ್ಡ್​ನ ಗಾಜುಗಳನ್ನು ಒಡೆದು ನಾಶ ಮಾಡಿದ್ದಾರೆ. ಈ ಕೃತ್ಯ ಎಸಗಿದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ದುರ್ನಡತೆಯ ಬಗ್ಗೆ ವೈದ್ಯರಿಂದ ಯಾವುದೇ ದೂರುಗಳು ಬಂದಿಲ್ಲ. ಡಾ. ಮುಕ್ತ ಕುಮಾರ್​ರ ಕ್ಯಾಬಿನ್​ನ್ನೂ ನಾಶ ಮಾಡಲಾಗಿದೆ. ಈ ಬಗ್ಗೆ ಅವರು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸೆಕ್ಟರ್​ 7 ಠಾಣೆಯ ಎಸ್​ಹೆಚ್​ಓ ಮಹಾಬೀರ್​ ಸಿಂಗ್​ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...