alex Certify ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ

ಹರಿಯಾಣದ ಹಿಸಾರ್​ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್​ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ ಗರ್​ಮುಕ್ತೇಶ್ವರ ಜಿಲ್ಲೆಯ ಸುಂದರ್​ ಪಾಲ್​ ಎಂಬವರು ದಾಖಲಿಸಿದ ದೂರನ್ನ ಆಧರಿಸಿ ಹನ್ಸಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಎಫ್​ಐಆರ್​ನಲ್ಲಿರುವ ಮಾಹಿತಿಯ ಪ್ರಕಾರ ಮೂವರು ಯುವಕರು ಟ್ರ್ಯಾಕ್ಟರ್​​ನ್ನು ಅದನ್ನ 3.7 ಲಕ್ಷ ರೂಪಾಯಿಗೆ ಸುಂದರ್​ಪಾಲ್​ಗೆ ಮಾರಾಟ ಮಾಡಿದ್ದಾರೆ. ಕೆಲ ತಿಂಗಳಿನಿಂದ ಸುಂದರ್​ಪಾಲ್​ ಒಳ್ಳೆಯ ಟ್ರ್ಯಾಕ್ಟರ್​ ಖರೀದಿ ಮಾಡಲು ಹುಡುಕಾಟ ನಡೆಸುತ್ತಿದ್ದರಂತೆ. ತಮ್ಮ ಸ್ನೇಹಿತ ಸುರೇಂದ್ರ ಸಿಂಗ್​​​ ಸಿಂಗ್​ ಜೊತೆ ಹನ್ಸಿಗೆ ಬಂದ ಸುಂದರ್​ ಪಾಲ್​​ ಸಂದೀಪ್​ ಹಾಗೂ ಪ್ರವೀಣ್​ ಎಂಬವರನ್ನ ಭೇಟಿ ಮಾಡಿದ್ದರು. ಇದಾದ ಬಳಿಕ ಸೂರ್ಯನಗರದ ಅಮನ್​ರನ್ನ ಭೇಟಿ ಮಾಡಿದ್ದರು.

ಈ ಮೂವರು ಸುಂದರ್​ ಪಾಲ್​ಗೆ ಯಾವುದೇ ದಾಖಲೆ ಹೊಂದಿರದ ಟ್ರ್ಯಾಕ್ಟರ್​ ಒಂದನ್ನ ತೋರಿಸಿದ್ದರು. ಮೊದಲು 3 ಲಕ್ಷದ 70 ಸಾವಿರ ಬೇಕೆಂದು ಮೂವರು ಹೇಳಿದ್ದರು. ಆದರೆ ಸುಂದರ್​ ಪಾಲ್​ 2.4 ಲಕ್ಷ ರೂಪಾಯಿ ನೀಡಿದ ಟ್ರ್ಯಾಕ್ಟರ್​ ಖರೀದಿ ಮಾಡಿದ್ದರು. ಉಳಿದ ಹಣವನ್ನ ದಾಖಲೆ ಸಿಕ್ಕ ಬಳಿಕ ನೀಡೋದಾಗಿಯೂ ಹೇಳಿದ್ದರು. ದಾಖಲೆಯನ್ನ ಪಡೆದುಕೊಂಡ ಸುಂದರ್​ ಪಾಲ್​ ಸಂಪೂರ್ಣ ಹಣ ಪಾವತಿ ಮಾಡಿದ್ದರು.

ಕೆಲ ತಿಂಗಳ ಬಳಿಕ ಸುಂದರ್​ ಪಾಲ್​ ಈ ಟ್ರ್ಯಾಕ್ಟರ್​ನ್ನು ಹಾಪುರ್​​ ಗ್ರಾಮದ ಒಬ್ಬರಿಗೆ ಮಾರಾಟ ಮಾಡಿದ್ದರು. ಇದಾದ ಕೆಲವು ದಿನಗಳ ಬಳಿಕ ಪೊಲೀಸರು ಸುಂದರ್​ ಪಾಲ್​ಗೆ ಇದು ಕಳುವು ಮಾಡಿದ ಟ್ರ್ಯಾಕ್ಟರ್​ ಎಂದು ಹೇಳಿದ್ದಾರೆ. ಇದೀಗ ಸುಂದರ್​ ಪಾಲ್​ ಮೂವರ ವಿರುದ್ಧ 3.7 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...