alex Certify ಕೆಲ ಗಂಟೆಗಳಲ್ಲೇ ನಿರ್ಧಾರವಾಗುತ್ತಾ ಅನ್​ಲಾಕ್​ ಭವಿಷ್ಯ….? ಮಹತ್ವದ ಸಭೆ ಕರೆದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲ ಗಂಟೆಗಳಲ್ಲೇ ನಿರ್ಧಾರವಾಗುತ್ತಾ ಅನ್​ಲಾಕ್​ ಭವಿಷ್ಯ….? ಮಹತ್ವದ ಸಭೆ ಕರೆದ ಸಿಎಂ

ಕೊರೊನಾ ಎರಡನೆ ಅಲೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದ ಬಳಿಕ ಸಾಕಷ್ಟು ಕಡೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸದ್ಯ ಇರುವ ಆದೇಶದ ಪ್ರಕಾರ ಜೂನ್​ 14ರ ಬೆಳಗ್ಗೆ 6 ಗಂಟೆಯವರೆಗೂ ಲಾಕ್​ಡೌನ್​ ಆದೇಶ ಜಾರಿಯಲ್ಲಿದೆ. ಆದರೆ ಲಾಕ್​ಡೌನ್​ ವಿಸ್ತರಣೆ ವಿಚಾರವಾಗಿ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಈ ನಡುವೆ ಸಂಜೆ 6 ಗಂಟೆಗೆ ಸಿಎಂ ಯಡಿಯೂರಪ್ಪ ಸಚಿವರ ಜೊತೆ ಸಭೆ ಕರೆದಿದ್ದು ಸಭೆ ಬಳಿಕ್​ ಲಾಕ್​ಡೌನ್​ ಭವಿಷ್ಯದ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಸದ್ಯದ ಮಾಹಿತಿಯ ಪ್ರಕಾರ ಜೂನ್​ 14ರಿಂದ ಒಂದು ವಾರಗಳ ಕಾಲ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್​ ಆದೇಶ ಮುಂದುವರಿಯುವ ಸಾಧ್ಯತೆ ಇದೆ. ಆಯಾ ಜಿಲ್ಲೆಗಳ ಡಿಸಿಗಳು ನೀಡಿರುವ ಕೊರೊನಾ ವಿವರಗಳನ್ನ ಆಧರಿಸಿ ಸರ್ಕಾರ ಜಿಲ್ಲಾವಾರು ಲಾಕ್​ಡೌನ್​ ಆದೇಶ ಜಾರಿಗೆ ತರಲಿದೆ ಎನ್ನಲಾಗ್ತಿದೆ.

ಶಿವಮೊಗ್ಗ, ತುಮಕೂರು, ಬೆಳಗಾವಿ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಮಂಡ್ಯ, ಧಾರವಾಡ, ಚಿಕ್ಕಮಗಳೂರಿನಲ್ಲಿ ಸೋಂಕಿನ ಪ್ರಮಾಣ ಇನ್ನೂ ಜಾಸ್ತಿಯೇ ಇರೋದ್ರಿಂದ ಇಲ್ಲಿ ಜೂನ್​ 21ರವರೆಗೂ ಲಾಕ್​ಡೌನ್​ ಆದೇಶ ಮುಂದುವರಿಯಲಿದೆ ಎಂದು ಹೇಳಲಾಗ್ತಾ ಇದೆ. ಸಚಿವರ ಜೊತೆಗಿನ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಹೊಸ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...