alex Certify ಈ ರಾಶಿಯವರು ಇಂದು ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರು ಇಂದು ಹಣ ಹೂಡಿಕೆ ಮಾಡುವ ಮುನ್ನ ಯೋಚಿಸಿ

ಮೇಷ : ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡುವ ಮುನ್ನ ಗಡಿಬಿಡಿ ಮಾಡಬೇಡಿ. ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ತಾಳ್ಮೆ ಕಾಯ್ದುಕೊಳ್ಳಿ. ಸಂಗಾತಿಯ ಮೇಲೆ ಪದೇ ಪದೇ ಅನುಮಾನ ಪಡುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ದಾಂಪತ್ಯ ನೌಕೆ ಕೊಚ್ಚಿ ಹೋಗಲಿದೆ.

ವೃಷಭ : ರಾಜಕೀಯ ರಂಗದವರಿಗೆ ಸಾರ್ವಜನಿಕ ಜೀವನದಲ್ಲಿ ಮನ್ನಣೆ ಸಿಗಲಿದೆ. ಅಲಂಕಾರಿಕ ಸಾಮಾಗ್ರಿ ಖರೀದಿಗೆ ಹೆಚ್ಚಿನ ಧನ್ಯವಯ ಮಾಡಲಿದ್ದೀರಿ. ಸರ್ಕಾರಿ ಕೆಲಸದ ವ್ಯವಹಾರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದ್ದೀರಿ.

ಮಿಥುನ : ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಲಿದೆ. ಇದರಿಂದ ಕೌಟುಂಬಿಕ ಜೀವನಕ್ಕೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ. ಸಂಬಂಧಿಗಳ ಹೊಟ್ಟೆಕಿಚ್ಚಿನ ಬುದ್ಧಿ ನಿಮಗೆ ಇನ್ನಷ್ಟು ಕಿರಿಕಿರಿ ಎನಿಸಬಹುದು. ಎಷ್ಟೇ ಕಷ್ಟ ಪಟ್ಟು ದುಡಿದರೂ ಖರ್ಚು ವೆಚ್ಚಗಳು ಹೆಚ್ಚಲಿದೆ.

ಕಟಕ : ನೀವು ಅಂದು ಕೆಲಸಗಳಲ್ಲಿ ಕಾರ್ಯಸಾಧನೆ ಮಾಡಲು ವಿಘ್ನಗಳು ಎದುರಾಗಲಿದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಹೊರಗಿನ ಆಹಾರ ಸೇವನೆ ಬೇಡ. ದೂರ ಪ್ರಯಾಣ ಕೂಡ ಒಳ್ಳೆಯದಲ್ಲ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರಲಿದೆ.

ಸಿಂಹ : ಕೋರ್ಟ್​ – ಕಚೇರಿ ವ್ಯವಹಾರಗಳಲ್ಲಿ ಜಯ ನಿಮ್ಮದಾಗಲಿದೆ. ಪ್ರೇಮ ವೈಫಲ್ಯದಿಂದ ಮಾನಸಿಕವಾಗಿ ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದೀರಿ. ಮನೋಶಾಸ್ತ್ರಜ್ಞರನ್ನು ಭೇಟಿಯಾಗಿ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದೇ ಆಗಲಿದೆ. ಅನಿರೀಕ್ಷಿತ ಮೂಲದಿಂದ ಧನಲಾಭವಿದೆ.

ಕನ್ಯಾ : ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇದೆ. ವಿವಿಧ ಮೂಲಗಳಿಂದ ಹಣ ಹರಿದು ಬರುವುದರಿಂದ ಧನಲಾಭ ನಿಮ್ಮದಾಗಲಿದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.

ತುಲಾ: ಸಾರ್ವಜನಿಕ ಜೀವನದಲ್ಲಿ ಗೌರವ ಗಳಿಸಲಿದ್ದೀರಿ. ಉದ್ಯಮಿಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ದಾಂಪತ್ಯ ಜೀವನದಲ್ಲಿ ವಿರಸ ಮೂಡಬಹುದು. ತಾಳ್ಮೆ ಕಾಯ್ದುಕೊಳ್ಳಿ.

ವೃಶ್ಚಿಕ : ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡುವ ಸಾಧ್ಯತೆ ಇದೆ. ಕಚೇರಿಯಲ್ಲಿ ನೀವು ಮಾಡುವ ಕೆಲಸ ನಿಮಗೆ ಪ್ರಶಂಸೆ ತಂದುಕೊಡಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಭಾಗ್ಯವಿದೆ. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಧನು : ಕಚೇರಿಯಲ್ಲಿ ಯಾರೊಂದಿಗೂ ವಿನಾಃಕಾರಣ ಮನಸ್ತಾಪ ಮಾಡಿಕೊಳ್ಳಬೇಡಿ. ಆಸ್ತಿ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಉಂಟಾಗಬಹುದು. ಸಂಗಾತಿ ನಿಮ್ಮೆಲ್ಲ ಕಷ್ಟಗಳಿಗೆ ಹೆಗಲಾಗಲಿದ್ದಾರೆ. ಸಂಬಂಧಿಗಳ ಜೊತೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.

ಮಕರ: ಕಚೇರಿ ಕೆಲಸದ ನಿಮಿತ್ತ ಇಷ್ಟವಿಲ್ಲದಿದ್ದರೂ ಪ್ರಯಾಣ ಮಾಡಬೇಕಾಗಿ ಬರಬಹುದು. ಅತಿಯಾದ ಪ್ರಯಾಣದಿಂದ ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ನೀವು ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.

ಕುಂಭ : ಮಾನಸಿಕವಾಗಿ ಹೆಚ್ಚು ಒತ್ತಡ ಅನುಭವಿಸುತ್ತಿದ್ದೀರಿ. ಇದು ನಿಜಕ್ಕೂ ಒಳ್ಳೆಯದಲ್ಲ. ಆದಷ್ಟು ಬೇಗ ನೀವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇಬೇಕಿದೆ. ಮನೆಗೆ ಹೊಸ ಅತಿಥಿ ಆಗಮನದ ನಿರೀಕ್ಷೆ ಇದೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣದ ಅವಕಾಶ ಕೂಡಿಬರಬಹುದು.

ಮೀನ : ಜವಳಿ ಉದ್ಯಮಿಗಳು, ಎಲೆಕ್ಟ್ರಾನಿಕ್​ ಉದ್ಯಮಿಗಳು ಹಾಗೂ ಕೃಷಿಕರಿಗೆ ಇದು ಶುಭದಿನವಾಗಿದೆ. ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸಲಿದ್ದೀರಿ. ಕೋರ್ಟ್ – ಕಚೇರಿ ವಿಚಾರದಲ್ಲಿ ಮುನ್ನಡೆ ಇದೆ. ಅಗ್ನಿಯಿಂದ ಆದಷ್ಟು ದೂರವಿರಿ. ನವ ವಿವಾಹಿತರಿಗೆ ಸಂತಾನ ಭಾಗ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...