alex Certify ಅಪಘಾತವಾದ ಕಾರ್ ನಲ್ಲಿ ನಾನಿರಲಿಲ್ಲ, DCM ಲಕ್ಷ್ಮಣ ಸವದಿ ಪುತ್ರ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತವಾದ ಕಾರ್ ನಲ್ಲಿ ನಾನಿರಲಿಲ್ಲ, DCM ಲಕ್ಷ್ಮಣ ಸವದಿ ಪುತ್ರ ಸ್ಪಷ್ಟನೆ

ಬೆಂಗಳೂರು: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಪ್ರಯಾಣಿಸುತ್ತಿದ್ದ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಆದರೆ, ಆಕಸ್ಮಿಕವಾಗಿ ಕಾರಿಗೆ ಅವರು ಅಡ್ಡ ಬಂದಿದ್ದರಿಂದ ಅಪಘಾತವಾಗಿದೆ. ಅಪಘಾತಕ್ಕೀಡಾದ ಕಾರ್ ನಲ್ಲಿ ನಾನು ಇರಲಿಲ್ಲ ಎಂದು ಚಿದಾನಂದ ಸವದಿ ಸ್ಪಷ್ಟಪಡಿಸಿದ್ದಾರೆ.

ನನ್ನ ಕಾರನ್ನು ಚಾಲಕ ಚಲಾಯಿಸುತ್ತಿದ್ದು, ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ನಾನು ಬೇರೆ ಸ್ನೇಹಿತರೊಂದಿಗೆ 30 ಕಿಲೋಮೀಟರ್ ದೂರದಲ್ಲಿ ಪ್ರಯಾಣಿಸುತ್ತಿದ್ದೆ. ಘಟನೆಯ ವೇಳೆ ನಾನು ಇರಲಿಲ್ಲ. ಅಪಘಾತದ ನಂತರ ಚಾಲಕ ಮಾಹಿತಿ ತಿಳಿಸಿದ ಕೂಡಲೇ ಸ್ಥಳಕ್ಕೆ ತೆರಳಿ ಆಂಬುಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ನಾನೇ ದಾಖಲಿಸಿದ್ದೇನೆ. ಸ್ಥಳದಲ್ಲಿದ್ದವರೊಂದಿಗೆ ಮಾತನಾಡಿ, ಪೊಲೀಸರಿಗೂ ಮಾಹಿತಿ ನೀಡಿ ಬಂದಿದ್ದೇನೆ ಎಂದು ಚಿದಾನಂದ ಸವದಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...