alex Certify ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿವುದನ್ನು ಕಾಲವೇ ನಿರ್ಧರಿಸಲಿದೆ: ಸಿ.ಎಂ. ಇಬ್ರಾಹಿಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿವುದನ್ನು ಕಾಲವೇ ನಿರ್ಧರಿಸಲಿದೆ: ಸಿ.ಎಂ. ಇಬ್ರಾಹಿಂ

ಮೈಸೂರು: ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲು ಒಂದೇ ಡಿಮ್ಯಾಂಡ್. ಕಾಂಗ್ರೆಸ್ ಪಕ್ಷದಲ್ಲಿ ಸಜ್ಜನರಿಗೆ ಅವಕಾಶ ನೀಡುವಂತೆ ಆಗ್ರಹಿಸುತ್ತೇನೆ. ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲು ಸಜ್ಜನರಿಗೆ ಅಧಿಕಾರ ಕೊಡಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಒಂದು ವರ್ಷದ ನಂತರ ಸಿದ್ಧರಾಮಯ್ಯ, ನಾನು ಭೇಟಿಯಾಗಿದ್ದೆವು. ದೆಹಲಿಗೆ ತೆರಳಿ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರ ಜೊತೆಗೆ ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ವ್ಯಾಪಾರ ಇಲ್ಲ. ದೇವೇಗೌಡರನ್ನು ಭೇಟಿಯಾಗಿದ್ದೆ. ಅಡ್ವಾಣಿಯವರ ಮನೆಗೆ ಹೋಗಿದ್ದೆ. ಆರೆಸ್ಸೆಸ್ ನಲ್ಲಿಯೂ ನನಗೆ ಸ್ನೇಹಿತರಿದ್ದಾರೆ. ಆದರೆ, ಅವರ ವಿಚಾರಧಾರೆ ಬೇರೆ. ನಮ್ಮ ವಿಚಾರವೇ ಬೇರೆ ಇರುತ್ತದೆ. ದೇಶಕ್ಕೆ ಒಳ್ಳೆಯದಾಗಬೇಕು ಎನ್ನುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದಲ್ಲಿ ಉಳಿಯುವುದನ್ನು ಕಾಲವೇ ನಿರ್ಧರಿಸಲಿದೆ. ನನ್ನ ಮತ್ತು ಸಿದ್ದರಾಮಯ್ಯನವರ ನಡುವೆ ಸ್ನೇಹ ಸಂಬಂಧ ಇದ್ದೇ ಇರುತ್ತದೆ. ಸದ್ಯಕ್ಕೆ ಮೂರು ಪಕ್ಷಗಳ ಕತೆ ಒಂದೇ ರೀತಿ ಆಗಿದೆ. ಚಿತ್ರಮಂದಿರದಲ್ಲಿ ಕರೆಂಟ್ ಹೋದಾಗ ಪ್ರೇಕ್ಷಕರ ಸ್ಥಿತಿ ಇರುವ ರೀತಿಯಲ್ಲಿ ಇದೆ. ನಾನು ಪದೇಪದೇ ದೆಹಲಿಗೆ ಹೋಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಕುದುರೆ ಚೆನ್ನಾಗಿದ್ದರೆ ಖರೀದಿಸಲು ಮನೆ ಮುಂದೆ ಬರುತ್ತಾರೆ. ಹಾಗಾಗಿ ಅವರು ಯಾವಾಗ ಕರಿತಾರೆಯೋ ಅವಾಗ ಹೋಗುತ್ತೇನೆ. ರಾಜಕಾರಣದಲ್ಲಿ ಮರ್ಯಾದಸ್ಥರು ಇರುವುದು ವಿರಳವಾಗಿದೆ. ವೀರೇಂದ್ರ ಪಾಟೀಲರು, ದೇವೇಗೌಡರು, ಜೆ.ಹೆಚ್. ಪಟೇಲರಂತಹ ನಾಯಕರು, ತಳಿಗಳು ರಾಜಕಾರಣದಲ್ಲಿ ಉಳಿಯಬೇಕು ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...