alex Certify ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

'काश! मेरे पिता इस दिन के लिए जिंदा होते', टीम इंडिया में जगह मिलते ही भावुक हुआ ये खिलाड़ी

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ವೇಗದ ಬೌಲರ್ ಚೇತನ್ ಸಕರಿಯಾ ಅವರ ತಂದೆ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದರು.

ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗ್ತಿದ್ದಂತೆ ಚೇತನ್ ಸಕಾರಿಯಾ ಭಾವುಕರಾದರು. ಈ ಸಂದರ್ಭದಲ್ಲಿ ತಂದೆ ಜೀವಂತವಾಗಿರಬೇಕಿತ್ತು ಎಂದು ಚೇತನ್ ಹೇಳಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡುವಾಗ ಚೇತನ್ ಸಕರಿಯಾ, ಭಾರತಕ್ಕಾಗಿ ಆಡಬೇಕೆಂದು ತಂದೆ ಬಯಸಿದ್ದರು. ಇಂದು ನಾನು ಅವರನ್ನು ಮಿಸ್ ಮಾಡಿಕೊಳ್ತಿದ್ದೇನೆ. ದೇವರು ಒಂದು ವರ್ಷದಲ್ಲಿ ನನಗೆ ಸಾಕಷ್ಟು ಏರಿಳಿತಗಳನ್ನು ತೋರಿಸಿದ್ದಾನೆ. ಇದು ಇಲ್ಲಿಯವರೆಗಿನ ಭಾವನಾತ್ಮಕ ಪ್ರಯಾಣವಾಗಿದೆ ಎಂದು ಚೇತನ್ ಹೇಳಿದ್ದಾರೆ.

ಕಿರಿಯ ಸಹೋದರನನ್ನು ಕಳೆದುಕೊಂಡೆ. ಇದಾದ ಒಂದು ತಿಂಗಳ ನಂತರ ಐಪಿಎಲ್ ನಲ್ಲಿ ದೊಡ್ಡ ಆಫರ್ ಸಿಕ್ಕಿತು. ಕಳೆದ ತಿಂಗಳು ನನ್ನ ತಂದೆಯನ್ನು ಕಳೆದುಕೊಂಡೆ. ಈಗ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾನೆ. ನನ್ನ ತಂದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಗ ನಾನು ಅವರ ಜೊತೆ ಏಳು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದೆ ಎಂದು ಚೇತನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...