alex Certify BIG NEWS: ಸಚಿವ ಸಿ.ಪಿ. ಯೋಗೇಶ್ವರ್ ಗೆ ಬಿ.ಸಿ. ಪಾಟೀಲ್ ಟಾಂಗ್; ಡಿಕೆಶಿ ಕನಸೂ ನನಸಾಗಲ್ಲ ಎಂದು ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಚಿವ ಸಿ.ಪಿ. ಯೋಗೇಶ್ವರ್ ಗೆ ಬಿ.ಸಿ. ಪಾಟೀಲ್ ಟಾಂಗ್; ಡಿಕೆಶಿ ಕನಸೂ ನನಸಾಗಲ್ಲ ಎಂದು ವಾಗ್ದಾಳಿ

ಹಾವೇರಿ: ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡಿರುವ ಸಚಿವ ಸಿ.ಪಿ. ಯೋಗೇಶ್ವರ್ ಗೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಇಂತಹ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂಬುದು ಗೊತ್ತು. ಅಂಬಾರಿ ಹೊರಲು ಶಕ್ತಿಯಿದೆ ಎಂದೇ ಜನ ಆಯ್ಕೆ ಮಾಡಿರುವುದು ಎಂದು ಹೇಳಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ್, ಅಪ್ಪ ಅಂಬಾರಿ ಹೊತ್ತಿದ್ದಾನೆ ಎಂದು ಮಗನಿಗೂ ಕೊಡಲಾಗದು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅಪ್ಪನಿಗೆ ಅಂಬಾರಿ ಹೊರಲು ಶಕ್ತಿಯಿದ್ದರೆ ಅಪ್ಪ ಹೊರುತ್ತಾನೆ. ಮಗನಿಗೆ ಶಕ್ತಿಯಿದ್ದರೆ ಮಗ ಹೊರುತ್ತಾನೆ. ಇದರಲ್ಲಿ ತಪ್ಪೇನಿದೆ. ಈ ಬಗ್ಗೆ ಪದೇ ಪದೇ ಮಾತನಾಡುವುದಿಲ್ಲ ಎಂದು ಟಾಂಗ್ ನೀಡಿದರು.

ಪತಿ ತಂದೆಯನ್ನೇ ಮದುವೆಯಾಗಿದ್ಲು ಮಾಜಿ ಪತ್ನಿ: RTI ಅರ್ಜಿಯಲ್ಲಿ ಶಾಕಿಂಗ್‌ ಸತ್ಯ ಬಯಲು

ಇದೇ ವೇಳೆ ಪಕ್ಷ ಬಿಟ್ಟವರೂ ಕಾಂಗ್ರೆಸ್ ಗೆ ಬರಲು ಡಿಕೆಶಿ ಆಹ್ವಾನ ವಿಚಾರವಾಗಿ ಮಾತನಾಡಿದ ಸಚಿವರು, ಯಾರು ಬೇಕಾದರೂ ಪಕ್ಷಕ್ಕೆ ಬರಲಿ ಎಂದು ಆಹ್ವಾನಿಸಿದ್ದಾರೆ. ಕಾಂಗ್ರೆಸ್ ಅರ್ಜಿ ಪಡೆಯುವವರು ಯಾರೂ ಇಲ್ಲ. ಹಾಗಾಗಿ ಹೋಲ್ ಸೇಲ್ ಆಗಿ ಆಹ್ವಾನಿಸಿದ್ದಾರೆ. ನಾವು ಯಾರೂ ಕಾಂಗ್ರೆಸ್ ಗೆ ಮತ್ತೆ ಹೋಗುವುದಿಲ್ಲ. ಡಿ.ಕೆ. ಶಿವಕುಮಾರ್ ಕನಸು ಕಾಣುತ್ತಿದ್ದಾರೆ ಅವರ ಕನಸು ಯಾವತ್ತೂ ನನಸಾಗಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...