alex Certify BIG NEWS: ವಲಸಿಗರಿಂದಲೇ ಬಿಜೆಪಿಗೆ ಡ್ಯಾಮೇಜ್ ಎಂದ ಶಾಸಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಲಸಿಗರಿಂದಲೇ ಬಿಜೆಪಿಗೆ ಡ್ಯಾಮೇಜ್ ಎಂದ ಶಾಸಕ…!

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕಸರತ್ತು ಇನ್ನೂ ಮುಂದುವರೆದಿದ್ದು, ವಲಸಿಗರಿಂದಲೇ ಬಿಜೆಪಿಗೆ ಡ್ಯಾಮೇಜ್ ಆಗುವ ಹೇಳಿಕೆ ನೀಡಲಾಗುತ್ತಿದೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.

ಗೃಹಿಣಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಅನಿಲ ಉಳಿತಾಯ ಮಾಡಬಲ್ಲ ಗ್ಯಾಸ್​ ಸ್ಟೌ ಶೀಘ್ರದಲ್ಲೇ ಲಭ್ಯ

ಯಾದಗಿರಿಯಲ್ಲಿ ಮಾತನಾಡಿದ ಅವರು, ಮೂಲ ಬಿಜೆಪಿಗರು ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನೀಡುತ್ತಿಲ್ಲ. ಬೇರೆ ಪಕ್ಷಗಳಿಂದ ಬಂದವರೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗೆ ನೋಡಿದರೆ ನಾನೂ ಕೂಡ ಬಿಜೆಪಿಗೆ ವಲಸಿಗನೇ. ಆದರೆ ನಾನು ಎಂದೂ ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದರು.

ಚುನಾವಣೆ ಯಾವಾಗ ಅನ್ನೋದೇ ಗೊತ್ತಿಲ್ಲದ ಸಮಯದಲ್ಲಿ ಸಿಎಂ ಬಗ್ಗೆ ಮಾತ್ಯಾಕೆ..? ಶಾಸಕರಿಗೆ ಸತೀಶ್​ ಜಾರಕಿಹೊಳಿ ಪ್ರಶ್ನೆ

ಬಿಜೆಪಿಯಲ್ಲಿದ್ದೇವೆ ಎಂದರೆ ಪಕ್ಷ ನಮಗೆ ತಾಯಿ ಇದ್ದಂತೆ. ತಾಯಿಗೆ ಅವಮಾನವಾಗುವ ರೀತಿ ಹೇಳಿಕೆ ನೀಡಬಾರದು. ನಮ್ಮ ಲಾಭಕ್ಕಾಗಿ ಪಕ್ಷವನ್ನೇ ಬಲಿಕೊಡುವ ಕೆಲಸ ಮಾಡಬಾರದು ಎಂದು ವಿರೋಧಿ ಬಣಗಳಿಗೆ ತಿರುಗೇಟು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...