alex Certify BIG NEWS: ಮೂರು ಮದುವೆಯಾಗಿ ಪತ್ನಿಯರಿಗೆ ವಂಚನೆ; ನಾಲ್ಕನೇ ಮದುವೆಗಾಗಿ ಪ್ರೇಯಸಿಯೊಂದಿಗೆ ಪರಾರಿಯಾದ ಭೂಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೂರು ಮದುವೆಯಾಗಿ ಪತ್ನಿಯರಿಗೆ ವಂಚನೆ; ನಾಲ್ಕನೇ ಮದುವೆಗಾಗಿ ಪ್ರೇಯಸಿಯೊಂದಿಗೆ ಪರಾರಿಯಾದ ಭೂಪ

ಚಿಕ್ಕಮಗಳೂರು: ಮೂರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ ವ್ಯಕ್ತಿಯೋರ್ವ ನಾಲ್ಕನೇ ಮದುವೆಗೆ ಸಿದ್ಧನಾಗಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರೇಯಸಿಯೊಂದಿಗೆ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ ನಡೆದಿದೆ.

ಬಾಳೆಹೊನ್ನೂರು ನಿವಾಸಿ ಯೂಸುಫ್ ಹೈದರ್ ಆರೋಪಿ. ಮೂವರನ್ನು ಮದುವೆಯಾಗಿ ಪತ್ನಿಯರಿಗೆ ಕೈಕೊಟ್ಟಿರುವ ಹೈದರ್ ತಾನು ಮಂತ್ರವಾದಿ ಎಂದು ಹೇಳಿಕೊಂಡು ಅಮಾಯಕರಿಗೆ ಮೋಸ ಮಾಡುತ್ತಿದ್ದಾನೆ ಎನ್ನಲಾಗಿದೆ.

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ಅಲ್ಲದೇ ನಾಲ್ಕನೇ ಮದುವೆಯಾಗಲು ಸಿದ್ಧತೆ ನಡೆಸಿಕೊಂಡಿದ್ದಾನೆ. ಈತನಿಂದ ಮೋಸ ಹೋದ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಳಸ ಪಟ್ಟಣದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ.

ಸಕಲೇಶಪುರ, ಮೂಡಿಗೆರೆ ಹಾಗೂ ಆಲ್ದೂರಿನ ಮೂವರು ಮಹಿಳೆಯರನ್ನು ವಿವಾಹವಾಗಿ ವಂಚಿಸಿದ್ದು, ಹೈದರ್ ನನ್ನು ಬಂಧಿಸುವಂತೆ ಮೂರು ಪತ್ನಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...