alex Certify BIG NEWS: ಫ್ಲಾಟ್​ ವಾಪಸ್​ ಕೇಳಿದ್ದಕ್ಕೆ‌ ನಡೆಯಿತಾ ಚಂದ್ರಶೇಖರ್ ಗುರೂಜಿ ಕೊಲೆ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫ್ಲಾಟ್​ ವಾಪಸ್​ ಕೇಳಿದ್ದಕ್ಕೆ‌ ನಡೆಯಿತಾ ಚಂದ್ರಶೇಖರ್ ಗುರೂಜಿ ಕೊಲೆ..?

ಹುಬ್ಬಳ್ಳಿ: ಚಂದ್ರಶೇಖರ್​ ಗುರೂಜಿ ಹುಬ್ಬಳ್ಳಿಯ ಹೋಟೆಲ್​ನಲ್ಲಿ ಕೊಲೆಯಾದ ಬಳಿಕ ಈ ಕೊಲೆಗೆ ಸಾಕಷ್ಟು ಆಯಾಮಗಳನ್ನು ನೀಡಲಾಗ್ತಿದೆ. ಚಂದ್ರಶೇಖರ್​ ಗುರೂಜಿ ಆಪ್ತರೇ ಈ ಕೊಲೆಯನ್ನು ನಡೆಸಿದ್ದಾರೆ ಎನ್ನುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ತಿಳಿದು ಬಂದಿದೆ.

ಜುಲೈ 2ರಿಂದ ಹುಬ್ಬಳ್ಳಿಯ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ಚಂದ್ರಶೇಖರ್​ ಗುರೂಜಿ ನಾಳೆ ಹೋಟೆಲ್​ನಿಂದ ತೆರಳುವವರಿದ್ದರು. ಈ ವಿಚಾರವನ್ನು ಮೊದಲೇ ತಿಳಿದಿದ್ದ ಆರೋಪಿಗಳಾದ ಮಹಂತೇಶ್​ ಶಿರೋಳ್​ ಹಾಗೂ ಮಂಜುನಾಥ್​​ ಇಂದೇ ಹೋಟೆಲ್​ಗೆ ತೆರಳಿ ಚಂದ್ರಶೇಖರ್​ ಗುರೂಜಿಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ.

ಚಂದ್ರಶೇಖರ್​ ಗುರೂಜಿ ಸಾವಿನ ಹಿಂದೆ ವನಜಾಕ್ಷಿ ಎಂಬಾಕೆಯ ಪಾತ್ರವಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರ್ತಿದೆ. ಸರಳ ವಾಸ್ತು ಕಂಪನಿಯಲ್ಲಿ 2019ರವರೆಗೆ ಸೇವೆ ಸಲ್ಲಿಸಿದ್ದ ಈಕೆ ಹಾಗೂ ತಮ್ಮ ಆಪ್ತರಾಗಿದ್ದ ಮಹಂತೇಶ್​ ಶಿರೋಳ್​ಗೆ ಚಂದ್ರಶೇಖರ್​ ಗುರೂಜಿಯೇ ಮದುವೆ ಮಾಡಿಸಿದ್ದರು ಎನ್ನಲಾಗಿದೆ. ಅಲ್ಲದೇ ದಂಪತಿಗೆ ಉಳಿದುಕೊಳ್ಳಲು ತಮ್ಮದೇ ಫ್ಲ್ಯಾಟ್​ ಕೂಡ ಗುರೂಜಿ ನೀಡಿದ್ದರಂತೆ.

ಚಂದ್ರಶೇಖರ್​ ಗುರೂಜಿ ಸಂಸ್ಥೆಗೆ ಕೆಲಸ ಮಾಡುವುದನ್ನು ನಿಲ್ಲಿಸಿದ ಬಳಿಕ ಗುರೂಜಿ ತಮ್ಮ ಫ್ಲ್ಯಾಟ್​ ಮರಳಿ ನೀಡಿ ಎಂದು ಕೇಳುತ್ತಿದ್ದರಂತೆ. ಇದಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಮಹಂತೇಶ್​ ಹಾಗೂ ವನಜಾಕ್ಷಿ ದಂಪತಿ ತಮಗೆ ಉಪಕಾರ ಮಾಡಿದ್ದ ಗುರೂಜಿಯ ಸಾವಿಗೆ ಮುಹೂರ್ತವಿಟ್ಟಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...