alex Certify BIG NEWS: ನನಗೆ ಶಿಕ್ಷಣ ಖಾತೆ ಕೊಟ್ಟರು ಕೊಡಬಹುದು; ಮನದಾಳದ ಮಾತು ಹೇಳಿದ ಪರಿಷತ್ ನೂತನ ಸದಸ್ಯ ಬಸವರಾಜ್ ಹೊರಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನಗೆ ಶಿಕ್ಷಣ ಖಾತೆ ಕೊಟ್ಟರು ಕೊಡಬಹುದು; ಮನದಾಳದ ಮಾತು ಹೇಳಿದ ಪರಿಷತ್ ನೂತನ ಸದಸ್ಯ ಬಸವರಾಜ್ ಹೊರಟ್ಟಿ

ಬೆಂಗಳೂರು: ನನಗೆ ಸಚಿವನಾಗಬೇಕು ಎಂಬ ಆಸೆಯಿಲ್ಲ, ಸಭಾಪತಿ ಸ್ಥಾನ ಕೊಟ್ಟರೆ ಸಾಕು ಎಂದು ವಿಧಾನಪರಿಷತ್ ನೂತನ ಸದಸ್ಯ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ನನಗೆ ಶಿಕ್ಷಣ ಖಾತೆ ಕೊಟ್ಟರು ಕೊಡಬಹುದು. ಆದರೆ ನನಗೆ ಸಚಿವ ಸ್ಥಾನದ ಉಸಾಬರಿಯೇ ಬೇಡ. ಮಂತ್ರಿಯಾಗುವ ಯಾವ ಇಚ್ಛೆಯೂ ನನಗಿಲ್ಲ ಎಂದು ಹೇಳಿದರು.

ಸಭಾಪತಿ ಸ್ಥಾನ ಕೊಟ್ಟರೆ ಸಾಕು ಅದನ್ನು ನಿಭಾಯಿಸುತ್ತೇನೆ. ಹೊರತು ಮಂತ್ರಿಯಾಗಬೇಕು ಎಂಬ ಆಸೆ ನನಗಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...