alex Certify BIG NEWS: ಎಲ್ಲಾ ಗೊಂದಲಗಳಿಗೂ ವರಿಷ್ಠರೇ ತೆರೆ ಎಳೆಯಲಿದ್ದಾರೆ; ಏನಾಗುತ್ತೋ ನೋಡೋಣ ಎಂದ ಸಚಿವ ಯೋಗೇಶ್ವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಲ್ಲಾ ಗೊಂದಲಗಳಿಗೂ ವರಿಷ್ಠರೇ ತೆರೆ ಎಳೆಯಲಿದ್ದಾರೆ; ಏನಾಗುತ್ತೋ ನೋಡೋಣ ಎಂದ ಸಚಿವ ಯೋಗೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಗೊಂದಲಗಳಿಗೆ ವರಿಷ್ಠರೇ ತೆರೆ ಎಳೆಯಲಿದ್ದಾರೆ. ಏನಾಗುತ್ತೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದು ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.

ಬ್ಲಾಕ್‌ ಫಂಗಸ್:‌ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಡಾ. ರಾಜು ನೀಡಿದ್ದಾರೆ ಉತ್ತರ

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇನ್ನೂ ಎರಡು ವರ್ಷ ನಾನೇ ಸಿಎಂ ಎಂದು ಯಡಿಯೂರಪ್ಪನವರೇ ಹೇಳಿರುವಾಗ ನಮ್ಮದೇನಿದೆ. ಅವರೇ ಸ್ಪಷ್ಟವಾಗಿ ಉತ್ತರ ರವಾನಿಸಿದ್ದಾರೆ. ಹಾಗಾಗಿ ಈ ವಿಚಾರದ ಬಗ್ಗೆ ಚರ್ಚೆ ಗೊಂದಲಗಳಿಲ್ಲ. ಸಣ್ಣ ಪುಟ್ಟ ಗೊಂದಲಗಳ ಬಗ್ಗೆ ವರಿಷ್ಠರು ನೋಡಿಕೊಳ್ಳುತ್ತಾರೆ. ಅವರೇ ಎಲ್ಲದಕ್ಕೂ ತೆರೆ ಎಳೆಯುತ್ತಾರೆ ಎಂದರು.

ಲಸಿಕೆ ಅಭಿಯಾನದಲ್ಲಿ ಗರ್ಭಿಣಿಯರಿಗೂ ಆದ್ಯತೆ ನೀಡಲು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ಮಹಿಳೆ

ಇದೇ ವೇಳೆ ಶಾಸಕ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದು, ನಾಯಕರು ಹಾಗೂ ಶಾಸಕರ ಭೇಟಿ ಮಾಡಲಿದ್ದಾರೆ. ನಾನೂ ಕೂಡ ಅರುಣ್ ಸಿಂಗ್ ಭೇಟಿಯಾಗಲಿದ್ದೇನೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...