alex Certify ಕೃಷಿ ಖಾತೆಯಲ್ಲಿ ಧಿಕ್ಕಾರವೇ ಜಾಸ್ತಿಯಾಗಿದೆ: ಬಿ.ಸಿ. ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಖಾತೆಯಲ್ಲಿ ಧಿಕ್ಕಾರವೇ ಜಾಸ್ತಿಯಾಗಿದೆ: ಬಿ.ಸಿ. ಪಾಟೀಲ್

ಚಾಮರಾಜನಗರ: ಕೃಷಿ ಖಾತೆಯಲ್ಲಿ ಜೈಕಾರಕ್ಕಿಂತ ಧಿಕ್ಕಾರವೇ ಜಾಸ್ತಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಆರಂಭದಲ್ಲಿ ಮುಖ್ಯಮಂತ್ರಿಯವರು ನನಗೆ ಅರಣ್ಯ ಇಲಾಖೆಯ ಖಾತೆ ಕೊಟ್ಟಿದ್ದರು. ಕಾಡು ಪ್ರಾಣಿಗಳ ಜೊತೆಗೆ ಇರುವುದು ಬೇಡ, ರೈತರೊಂದಿಗೆ ಇರುವ ಉದ್ದೇಶದಿಂದ ಕೃಷಿ ಖಾತೆ ಕೇಳಿ ಪಡೆದಿದ್ದೆ. ಆದರೆ, ಕೃಷಿ ಕತೆಯಲ್ಲಿ ಧಿಕ್ಕಾರ ಜಾಸ್ತಿಯಾಗಿದೆ ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಧಿಕ್ಕಾರದ ಘೋಷಣೆ ಕೇಳಿದ್ದೆ. ಹೀಗಾಗಿ ಧಿಕ್ಕಾರ ನನಗೆ ಹೊಸದೇನಲ್ಲ. ರೈತರ ಸಮಸ್ಯೆಯನ್ನು ನೇರವಾಗಿ ಅರಿತು ಅವರಿಗೆ ಸೌಲಭ್ಯ ಕಲ್ಪಿಸಲು ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಪ್ರಚಾರಕ್ಕಾಗಿ ಇದನ್ನು ಕೈಗೊಂಡಿಲ್ಲ. ನನಗೆ ಪ್ರಚಾರ ಬೇಕಿಲ್ಲ. ರೈತರ ಮನೆ ಬಾಗಿಲಿಗೆ ಸರ್ಕಾರದ ಯೋಜನೆ ತಲುಪಿಸುವ ಉದ್ದೇಶದೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...