alex Certify ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ

ಮೇಷ : ಧನಾಗಮನವಾಗೋದು ವಿಳಂಬವಾದರೂ ಸಹ ನಿರಾಶೆ ಉಂಟಾಗೋದಿಲ್ಲ. ಕುಟುಂಬಸ್ಥರ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಮೂಡಲಿದೆ. ವೃತ್ತಿರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ.

ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ ಕಾದಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ನೆಲೆಸಲಿದೆ.

ವೃಷಭ : ವೃತ್ತಿರಂಗದಲ್ಲಿ ನಿಮ್ಮ ಸ್ವಾರ್ಥ ಬುದ್ಧಿಯಿಂದ ಕಿರಿಕಿರಿ ಅನುಭವಿಸಲಿದ್ದೀರಿ . ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಸಹ ಆರ್ಥಿಕ ಜೀವನದಲ್ಲಿ ಸುಧಾರಣೆ ಇಲ್ಲ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಾಭಿವೃದ್ಧಿ ಮಾಡುವವರಿಗೆ ಇದು ಸಕಾಲವಲ್ಲ.

ಮಿಥುನ : ಕುಟುಂಬದಲ್ಲಿ ನೆಮ್ಮದಿ ಇದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲ. ಉದ್ಯೋಗದಲ್ಲಿ ಸ್ಪರ್ಧೆಯನ್ನ ಕಾಣಲಿದ್ದೀರಿ. ವೃತ್ತಿಯ ಕಾರಣಕ್ಕೆ ಪ್ರಯಾಣ ಮಾಡಬೇಕಾಗಿ ಬರಬಹುದು. ದೇವರ ದರ್ಶನದಿಂದ ಮನಸ್ಸಿಗೆ ಶಾಂತಿ ಸಿಗುವ ಸಾಧ್ಯತೆ ಇದೆ.

ಕಟಕ : ವೃತ್ತಿರಂಗದಲ್ಲಿ ಹಿತಶತ್ರುಗಳ ಭಯ ನಿಮ್ಮನ್ನ ಕಾಡಲಿದೆ. ವ್ಯವಹಾರದಲ್ಲಿ ಪಾಲುದಾರನಾಗಿ ಬಂಡವಾಳ ಹೂಡುವಾಗ ಎಚ್ಚರಿಕೆ ವಹಿಸಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಖರ್ಚು ವೆಚ್ಚಗಳ ವಿಚಾರದಲ್ಲಿ ಹಿಡಿತ ಸಾಧಿಸಲೇಬೇಕು. ಸಂಗಾತಿಯಿಂದ ಉಡುಗೊರೆಗಳನ್ನ ನಿರೀಕ್ಷಿಸಲಿದ್ದೀರಿ.

ಸಿಂಹ : ಭೂ ಖರೀದಿ ವಿಚಾರದಲ್ಲಿ ಆಸಕ್ತಿ ವಹಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಧನಾಭಿವೃದ್ಧಿ ಇದ್ದರೂ ಮಾನಸಿಕವಾಗಿ ನೆಮ್ಮದಿ ಕುಗ್ಗಲಿದೆ. ಸಂಸಾರದಲ್ಲಿ ತಾಳ್ಮೆ ಇಲ್ಲದೇ ನೆಮ್ಮದಿ ಇಲ್ಲ. ರಾಜಕೀಯ ವಲಯದಲ್ಲಿರುವವರಿಗೆ ಅದೃಷ್ಟ ಇದೆ.

ಕನ್ಯಾ: ಕೈ ಕಾಲು ನೋವಿನ ಸಮಸ್ಯೆ ಉಂಟಾಗಬಹುದು. ಹಿಡಿದ ಕೆಲಸಗಳು ಸರಿಯಾಗಿ ಆಗದೇ ಇರೋದ್ರಿಂದ ಮನಸ್ಸಿನಲ್ಲಿ ಅಶಾಂತಿ ಉಂಟಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ತೊಂದರೆ ಕಾಡಲಿದೆ. ನಿಮ್ಮ ಸಂಗಾತಿ ಜೊತೆಯಲ್ಲಿ ವಾದ ಉಂಟಾಗಬಹುದು.

ತುಲಾ : ಉನ್ನತ ವಿದ್ಯಾಭಾಸ ಮಾಡುವವರಿಗೆ ಅವಕಾಶ ಸಿಗಲಿದೆ. ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು. ನಿಮ್ಮ ಕಷ್ಟಕ್ಕೆ ಆಪ್ತರು ನೆರವಾಗಲಿಲ್ಲ ಎಂಬ ಚಿಂತನೆ ಬೇಡ. ಯಾರನ್ನೂ ದೂರ ಮಾಡಿಕೊಳ್ಳಲು ಹೋಗಬೇಡಿ. ಅಂತರಂಗದ ಕೆಲವು ಗುಟ್ಟುಗಳನ್ನ ಯಾರ ಮುಂದೆಯೂ ಬಿಚ್ಚಿಡಬೇಡಿ.

ವೃಶ್ಚಿಕ : ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಸಾಧ್ಯತೆ ಇದೆ. ಆಪ್ತರ ಸಹಾಯದಿಂದ ಹಲವು ದಿನಗಳಿಂದ ಬಾಕಿ ಉಳಿದ ಕೆಲಸ ಈಡೇರಲಿದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಾದಿದೆ. ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಕಣ್ಣು ನೋವಿನ ಸಮಸ್ಯೆ ಉಂಟಾಗಬಹುದು.

ಮಕರ : ಕೆಲಸದ ಸ್ಥಳದಲ್ಲಿ ಕೊಂಚ ಬದಲಾವಣೆ ಆಗಲಿದ್ದು ಹೊಸ ಯೋಜನೆ ಶುರುವಾಗಲಿದೆ. ವಯಸ್ಕರಿಗೆ ಕಂಕಣ ಭಾಗ್ಯ ಕಾದಿದೆ. ನಿಮ್ಮ ದೃಢ ನಿರ್ಧಾರಗಳಿಂದ ಸಮಸ್ಯೆಗಳುನ್ನ ಯೋಗ್ಯ ರೀತಿಯಲ್ಲಿ ಎದುರಿಸಲಿದ್ದೀರಿ. ನಿರುದ್ಯೋಗಿಗಳಿಗೆ ಇನ್ನಷ್ಟು ಕಾಯುವ ಕಷ್ಟ ತಪ್ಪಿದ್ದಲ್ಲ.

ಕುಂಭ : ಹಿಡಿದ ಕೆಲಸ ಕೈಗೂಡದೇ ಮಾನಸಿಕವಾಗಿ ನೋವುಂಟಾಗಬಹುದು. ಖರ್ಚು ವೆಚ್ಚಗಳು ಹೆಚ್ಚಾಗೋದ್ರಿಂದ ಧನಾಗಮನದಿಂದ ಎರಡೂ ಸಮತೋಲನವಾಗಲಿದೆ. ಆಗಾಗ ಆರೋಗ್ಯದಲ್ಲಿ ಏರುಪೇರು ಕಾಣಿಸಬಹುದು. ಸಮಯಕ್ಕೆ ತಕ್ಕಂತೆ ನಡೆಯೋದ್ರಿಂದ ಮಾತ್ರ ಮಾನಸಿಕ ನೆಮ್ಮದಿ ನಿಮ್ಮದಾಗಬಹುದು.

ಮೀನ : ಆಹಾರ ಸೇವೆನಯಲ್ಲಿ ಜಾಗರೂಕರಾಗಿ ಇರೋದು ಅತ್ಯಗತ್ಯ. ನಿಮ್ಮ ಕಾರ್ಯದ ವಿವರಗಳನ್ನ ಸಹೋದ್ಯೋಗಿಗಳ ಜೊತೆ ಹಂಚಿಕೊಂಡಲ್ಲಿ ತೊಂದರೆ ಇಲ್ಲ. ದೂರ ಪ್ರಯಾಣದಿಂದ ದೂರವೇ ಇರಿ. ಹಿರಿಯರ ಸಲಹೆಗಳನ್ನ ಸ್ವೀಕರಿಸಿ. ಮಿತ್ರರಿಂದ ನೆರವು ಸಿಗಲಿದೆ. ಇದರಿಂದ ಹರ್ಷಕ್ಕೆ ಹೊಸ ದಾರಿ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...