alex Certify ಡೆಂಟಿಸ್ಟ್​ ಎಂದು ನಂಬಿಸಿ ಅಮಾಯಕನ ಬಳಿ ಹಣ ದೋಚಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಂಟಿಸ್ಟ್​ ಎಂದು ನಂಬಿಸಿ ಅಮಾಯಕನ ಬಳಿ ಹಣ ದೋಚಿದ ಭೂಪ….!

ತಾನು ಲಂಡನ್​​ನ ದಂತ ವೈದ್ಯ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ 45 ವರ್ಷದ ವ್ಯಕ್ತಿಯೊಬ್ಬನಿಗೆ 75 ಸಾವಿರ ರೂಪಾಯಿ ವಂಚಿಸಿದ ಘಟನೆಯೊಂದು ವರದಿಯಾಗಿದೆ. ನಿರ್ಮಲಸಿಂಹ ವಘೇಲಾ ಎಂಬವರು ಈ ಸಂಬಂಧ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದಾರೆ.

ವಘೇಲಾ ನೀಡಿರುವ ಮಾಹಿತಿಯ ಪ್ರಕಾರ, ಡಾ.ಕಲ್ಯಾಣ ಬೋಧನ್​ ಎಂಬ ಹೆಸರಿನಲ್ಲಿ ಜೂನ್​ ತಿಂಗಳಲ್ಲಿ ಫೇಸ್​ಬುಕ್​ ರಿಕ್ವೆಸ್ಟ್​ ಒಂದು ಬಂದಿತ್ತು. ಆ ವ್ಯಕ್ತಿಯು ತಾನು ಲಂಡನ್​ನಲ್ಲಿ ದಂತವೈದ್ಯನಾಗಿದ್ದೆನೆಂದು  ಹೇಳಿಕೊಂಡಿದ್ದಾನೆ.

ಬಳಿಕ ಇಬ್ಬರೂ ಸೋಶಿಯಲ್​ ಮೀಡಿಯಾ ವೇದಿಕೆಯ ಮೂಲಕ ಫ್ರೆಂಡ್ಸ್​ ಆಗಿದ್ದರು. ಬೋಧನ್​​ ಮೆಸೆಂಜರ್​ ಮೂಲಕ ವಘೇಲಾ ಬಳಿ ಭಾರತೀಯ ಸಂಸ್ಕೃತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಕಲ್ಯಾಣ್​ ತಾನು ಶೀಘ್ರದಲ್ಲೇ ಭಾರತಕ್ಕೆ ಬರುತ್ತೇನೆಂದೂ ಇಲ್ಲಿ ವಾಸ್ತುಶಿಲ್ಪ ಕಲಾಕೃತಿ, ಆಭರಣ ಹಾಗೂ ಬಟ್ಟೆಗಳನ್ನು ಖರೀದಿಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಶಾಪಿಂಗ್​​ ಆಸೆಗೆ ವಘೇಲಾ ಬಳಿ ಸಹಾಯ ಕೇಳಿದ್ದಾನೆ.

ಸುಳ್ಳು ಪತ್ತೆ ಹಚ್ಚಲೆಂದೇ ಅಭಿವೃದ್ಧಿಯಾಗಿದೆ ಹೊಸ ತಂತ್ರಜ್ಞಾನ..!

ಸ್ವಲ್ಪ ದಿನಗಳ ಬಳಿಕ ಬ್ರಿಟೀಷ್​ ಏರ್​ವೇಸ್ ಟಿಕೆಟ್​ ಫೋಟೋವನ್ನು ವಘೇಲಾಗೆ ಕಳುಹಿಸಿದ ಕಲ್ಯಾಣ್​ ತಾನು ಆಗಸ್ಟ್​ 4ರಂದು ಭಾರತಕ್ಕೆ ಬರುತ್ತಿರೋದಾಗಿ ಹೇಳಿದ್ದಾನೆ. ರಾಘವೇಂದ್ರ ಎಂಬವರು ವಘೇಲಾಗೆ ಕರೆ ಮಾಡಿ ಬೋಧನ್​ ಭಾರತಕ್ಕೆ ಬಂದಿದ್ದಾನೆ. ಆದರೆ ತೆರಿಗೆ ಹಣ ಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ಇದಾದ ಬಳಿಕ ವಘೇಲಾಗೆ ವಿಡಿಯೋ ಕಾಲ್​ ಮಾಡಿದ ಬೋಧನ್​ ನನಗೆ ಸಹಾಯದ ಅವಶ್ಯಕತೆ ಇದೆ ಎಂದಿದ್ದಾನೆ. ಮರಳಿ ಕೊಡುತ್ತೇನೆ ಎಂದು ಹೇಳಿ ವಘೇಲಾ ಬಳಿ 75 ಸಾವಿರ ರೂಪಾಯಿ ಹಣ ತೆಗೆದುಕೊಂಡಿದ್ದನು. ವಘೇಲಾ ಹಣ ನೀಡುತ್ತಿದ್ದಂತೆಯೇ ಮತ್ತೆ ಹಣ ಕೇಳೋಕೆ ಆರಂಭಿಸಿದ್ದಾರೆ. ಇದರಿಂದ ಅನುಮಾನಗೊಂಡ ವಘೇಲಾ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...