alex Certify ಚೆನ್ನೈನಲ್ಲಿ ಮಿತಿಮೀರಿದ ವರುಣನ ಅಬ್ಬರ….! ಪ್ರವಾಹದ ನೀರಿನಲ್ಲೇ ದೋಣಿ ವಿಹಾರ ನಡೆಸಿದ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈನಲ್ಲಿ ಮಿತಿಮೀರಿದ ವರುಣನ ಅಬ್ಬರ….! ಪ್ರವಾಹದ ನೀರಿನಲ್ಲೇ ದೋಣಿ ವಿಹಾರ ನಡೆಸಿದ ಖ್ಯಾತ ನಟ

ತಮಿಳು ಖ್ಯಾತ ನಟ ಮನ್ಸೂರ್​ ಅಲಿ ಖಾನ್​ ಪ್ರವಾಹದ ನೀರಿನಲ್ಲಿ ಹಾಡನ್ನು ಹಾಡುತ್ತಾ ತಾತ್ಕಾಲಿಕ ದೋಣಿಯಲ್ಲಿ ವಿಹಾರ ನಡೆಸಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಬಾತ್​ಟಬ್​ನ್ನು ದೋಣಿಯ ರೀತಿಯಲ್ಲಿ ಬಳಸಿಕೊಂಡ ಮನ್ಸೂರ್​ ಅಲಿ ಖಾನ್​ ಪ್ರವಾಹದ ನೀರಿನಲ್ಲಿ ತಮ್ಮ ಮನೆಯ ಸುತ್ತ ದೋಣಿ ವಿಹಾರ ನಡೆಸಿದ ವಿಡಿಯೋ ಇದಾಗಿದೆ.

ಭಾರೀ ಮಳೆಯಿಂದಾಗಿ ಚೆನ್ನೈನ ಹಲವು ಭಾಗಗಳು ಜಲಾವೃತವಾಗಿದೆ. ಹೀಗಾಗಿ ಚೆನ್ನೈನಲ್ಲಿ ರೆಡ್​ ಅಲರ್ಟ್​ ಘೋಷಣೆಯಾಗಿದೆ. ಆದರೂ ಸಹ ಚೆನ್ನೈನ ಹಲವು ಭಾಗಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಈ ಹಿಂದೆ ಸುರಿದ ಮಳೆಯಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಚೆನ್ನೈನಲ್ಲಿ ಶುಕ್ರವಾರ ಭಯಾನಕ ಮಳೆಯಾಗಿದೆ. ಈಗಾಗಲೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಚೆನ್ನೈನಲ್ಲಿ ಪರಿಸ್ಥಿತಿ ಇದೀಗ ವಿಕೋಪಕ್ಕೆ ತಿರುಗಿದೆ.

ಚೆನ್ನೈನಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸುವ ಸಲುವಾಗಿ ನಟ ಮನ್ಸೂರ್​ ಅಲಿ ಖಾನ್​ ಈ ರೀತಿ ದೋಣಿ ವಿಹಾರ ನಡೆಸಿದ್ದಾರೆ. ಅಂದಹಾಗೆ ಅವರು ಈ ದೋಣಿ ವಿಹಾರವನ್ನು ನುಂಗಂಬಾಕ್ಕಂನ ತಮ್ಮ ನಿವಾಸದ ಎದುರೇ ಮಾಡಿದ್ದಾರೆ. ಚೆನ್ನೈನಲ್ಲಿ ನೀರಿನ ಪ್ರಮಾಣ ಅಷ್ಟರ ಮಟ್ಟಿಗೆ ಏರಿಕೆ ಕಂಡಿದೆ.

ಪ್ಯಾಡ್ಲಿಂಗ್​ ಮಾಡುತ್ತಾ ಮನ್ಸೂರ್​ ಅಲಿ ಖಾನ್​ ತಮಿಳು ಹಾಡೊಂದನ್ನು ಹಾಡಿದ್ದಾರೆ. ಹುಟ್ಟಿದರೆ ತಮಿಳುನಾಡಿನಲ್ಲಿ ಹುಟ್ಟಿ ಚೆನ್ನೈನಲ್ಲಿ ತೇಲಬೇಕು ಎಂಬರ್ಥವನ್ನು ಈ ಹಾಡು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...