alex Certify ಹೈಕಮಾಂಡ್ ನಿಂದ ಒಳ್ಳೆ ನಿರ್ಧಾರ; ಕಾಲಚಕ್ರ ತಿರುಗುತ್ತಿರುತ್ತೆ ಎಂದ ಸೋಮಶೇಖರ ರೆಡ್ಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕಮಾಂಡ್ ನಿಂದ ಒಳ್ಳೆ ನಿರ್ಧಾರ; ಕಾಲಚಕ್ರ ತಿರುಗುತ್ತಿರುತ್ತೆ ಎಂದ ಸೋಮಶೇಖರ ರೆಡ್ಡಿ

ಬೆಂಗಳೂರು: ಸಿಎಂ ಯಡಿಯೂರಪ್ಪ ರಾಜೀನಾಮೆ ಸುಳಿವು ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ, ಪಕ್ಷ ಬೆಳೆಯಲು ಎಲ್ಲರೂ ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಹೈಕಮಾಂಡ್ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದೆ. ಎಲ್ಲರಿಗೂ ಒಳ್ಳೆಯದೇ ಆಗಲಿದೆ ಎಂದು ಹೇಳಿದರು.

2008ರಲ್ಲಿ ನಮ್ಮನ್ನು ಬಳಸಿಕೊಂಡರು ನಂತರ ಕೈಬಿಟ್ಟರು. ಬಳ್ಳಾರಿಯಲ್ಲಿ ಎಲ್ಲರಿಗೂ ನೋವಾಗಿತ್ತು. ಪಕ್ಷಕ್ಕಾಗಿ ನಾನೂ ಕಷ್ಟಪಟ್ಟಿದ್ದೇವೆ. ನಮಗೆ ಯಾವುದೇ ಸ್ಥಾನಮಾನ ಸಿಗಲಿಲ್ಲ. ನಾವು ಹೋದರೆ ಒಂದು ಸಹಿ ಕೂಡ ಮಾಡಿಕೊಡಲ್ಲ. ಈವರೆಗೆ ನಾನೂ ಎಲ್ಲವನ್ನೂ ಸಹಿಸಿಕೊಂಡಿರುವೆ. ರಾಜಕೀಯದಲ್ಲಿ ತಾಳಿದವನು ಬಾಳಿಯಾನು ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಕೊರೊನಾ ಭಯ: ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಭಾರತದ ಇಷ್ಟು ಆಟಗಾರರು

ಕಾಲಚಕ್ರ ಯಾವಾಗಲೂ ತಿರುಗುತ್ತಿರುತ್ತದೆ. ರಾಮುಲುಗೆ ಸೂಕ್ತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಹೈಕಮಾಂಡ್ ಒಂದು ಒಳ್ಳೆ ನಿರ್ಧಾರಕ್ಕೆ ಬಂದಿದೆ. ಏನೇ ಆದರೆ ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...