alex Certify ಬೈಕ್​ ಹಾರನ್​ ವಿಚಾರಕ್ಕೆ ಯುವಕನ ಹತ್ಯೆ: ಆರೋಪಿಗಳ ಬಂಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ಹಾರನ್​ ವಿಚಾರಕ್ಕೆ ಯುವಕನ ಹತ್ಯೆ: ಆರೋಪಿಗಳ ಬಂಧನ

ಬೈಕ್​ ಹಾರನ್​ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆಯು ಬಿ.ಸಿ. ರೋಡಿನ ಶಾಂತಿಯಂಗಡಿ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.

ಮಹಮ್ಮದ್​ ಆಸಿಫ್​ ಎಂಬಾತನನ್ನು ಮಹಮ್ಮದ್​ ನೌಫೆಲ್​ ಹಾಗೂ ಮಹಮ್ಮದ್​ ನೌಸೀರ್​​ ಕೊಲೆ ಮಾಡಿದ್ದು ಇವರನ್ನು ವಶಕ್ಕೆ ಪಡೆದಿರುವ ಬಂಟ್ವಾಳ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

ತಡರಾತ್ರಿ ಪೊನ್ನೋಡಿಯ ಹೋಟೆಲ್​ ಎದುರು ಪದೇ ಪದೇ ಹಾರ್ನ್ ಹಾಕುತ್ತಾನೆ ಎಂಬ ಕಾರಣಕ್ಕೆ ಮಹಮ್ಮದ್​ ಆಸಿಫ್​ ವಿರುದ್ಧ ಮಹಮ್ಮದ್​ ನೌಫೆಲ್​ ಹಾಗೂ ಮಹಮ್ಮದ್​ ನೌಸಿರ್​ ಸಿಟ್ಟಿಗೆದ್ದಿದ್ದರು. ಈ ಸಿಟ್ಟು ಅತಿರೇಖಕ್ಕೆ ತಿರುಗಿದ ಪರಿಣಾಮ ನೌಫೆಲ್​ ಹಾಗೂ ನೌಸಿರ್​ ಆಸಿಫ್​ನನ್ನು ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾರೆ.

ಈ ಸಂಬಂಧ ಶಾಂತಿಯಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...