alex Certify ಪ್ರಮುಖ ಧಾರ್ಮಿಕ ಪ್ರವಾಸಿ ಸ್ಥಳ ʼವೇಣೂರುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಧಾರ್ಮಿಕ ಪ್ರವಾಸಿ ಸ್ಥಳ ʼವೇಣೂರುʼ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಿವೆ. ಪ್ರವಾಸಿ ತಾಣಗಳು ಕೂಡ ಹೆಚ್ಚಾಗಿವೆ. ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 38 ಅಡಿ ಎತ್ತರದ ಬಾಹುಬಲಿ ಗೊಮ್ಮಟನ ವಿಗ್ರಹ ಇಲ್ಲಿದೆ.

ಬಸದಿಗಳು, ಮಹಾದೇವ ದೇವಾಲಯ ಸೇರಿದಂತೆ ಅನೇಕ ನೋಡಬಹುದಾದ ತಾಣಗಳಿವೆ. ಕ್ರಿ.ಶ. 1604 ರಲ್ಲಿ 4 ನೇ ತಿಮ್ಮಣ್ಣ ಅಜಿಲ ಬಾಹುಬಲಿ ವಿಗ್ರಹವನ್ನು ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಬೇರೆಯವರು ಈ ವಿಗ್ರಹವನ್ನು ತೆಗೆದುಕೊಂಡು ಹೋಗಬಾರದೆಂದು ನದಿಯ ದಡದಲ್ಲಿ ಹೂಳಲಾಗಿತ್ತು.

ಯುದ್ಧದಲ್ಲಿ ಜಯಿಸಿದ ನಂತರ ಗೊಮ್ಮಟನ ಮೂರ್ತಿಯನ್ನು ಹೊರತೆಗೆದು ಪುನಃ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಹೇಳಲಾಗುತ್ತದೆ. ವೇಣೂರು ಬಾಹುಬಲಿಯನ್ನು ನೋಡಲು ದೇಶ, ವಿದೇಶಗಳಿಂದಲೂ ಯಾತ್ರಿಕರು, ಪ್ರವಾಸಿಗರು ಬರುತ್ತಾರೆ.

ವೇಣೂರು ಸುತ್ತಮುತ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ. ಅವುಗಳನ್ನು ಒಮ್ಮೆ ನೋಡಿಕೊಂಡು ಬನ್ನಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...