alex Certify ಪತಿ ಹೀಗೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ: ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಪತ್ನಿ ವನಜಾಕ್ಷಿ ಕಣ್ಣೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ಹೀಗೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ: ಚಂದ್ರಶೇಖರ ಗುರೂಜಿ ಹತ್ಯೆ ಆರೋಪಿ ಪತ್ನಿ ವನಜಾಕ್ಷಿ ಕಣ್ಣೀರು

ಚಂದ್ರಶೇಖರ್ ಗುರೂಜಿಯವರ ಹತ್ಯೆ ಆರೋಪಿ ಮಹಾಂತೇಶನ ಪತ್ನಿ ವನಜಾಕ್ಷಿ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ, ನಮಗೆ ಅನ್ನ ಕೊಟ್ಟ ದೇವರನ್ನು ಪತಿ ಈ ರೀತಿ ಕೊಲೆ ಮಾಡುತ್ತಾನೆಂದು ಕನಸಿನಲ್ಲೂ ಎಣಿಸಿರಲಿಲ್ಲ. ಗುರೂಜಿಯವರು ನಮಗೆ ತಂದೆ ಸಮಾನರಾಗಿದ್ದರು ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ನಾನು ಚಂದ್ರಶೇಖರ ಗುರೂಜಿಯವರ ಬಳಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆ ನಂತರ ಮಹಾಂತೇಶ ಜೊತೆ ಮದುವೆಯಾಗಿದ್ದು, ಗುರೂಜಿ ನಮ್ಮ ಹೆಸರಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮಗೆ ಈಗಿರುವ ಒಂದು ಫ್ಲಾಟ್ ಅನ್ನು ಸಾಲ ಮಾಡಿ ಖರೀದಿಸಿದ್ದೇವೆ ಎಂದಿದ್ದಾರೆ.

ಪತಿ ಮಹಾಂತೇಶರನ್ನು ಮುಂಬೈ ಕಚೇರಿಗೆ ವರ್ಗಾವಣೆ ಮಾಡಿದಾಗ ಮಕ್ಕಳು ಚಿಕ್ಕವಿದ್ದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗದೆ ಕೆಲಸ ಬಿಟ್ಟಿದ್ದರು ಎಂದಿರುವ ವನಜಾಕ್ಷಿ, ಕಳೆದ ನಾಲ್ಕೈದು ದಿನಗಳಿಂದ ಪತಿ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಈ ಕುರಿತು ಕೇಳಿದಾಗ ಕೆಲಸವಿದೆ ಎಂದಿದ್ದರು ಎಂದು ತಿಳಿಸಿದ್ದಾರೆ.

ಘಟನೆ ನಡೆದ ದಿನ ನಾನು ಮನೆಯಲ್ಲಿದ್ದೆ. ನನಗೆ ಒಬ್ಬರು ಫೋನ್ ಮಾಡಿ ಟಿವಿ ನೋಡಲು ಹೇಳಿದಾಗಲೇ ವಿಚಾರ ತಿಳಿದಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಬಾಗಿಲು ತಟ್ಟಿದ ಪೊಲೀಸರು ನನ್ನನ್ನು ವಿಚಾರಣೆಗೆ ಕರೆದುಕೊಂಡು ಹೋಗಿ ಬಳಿಕ ಬಿಟ್ಟು ಕಳಿಸಿದ್ದಾರೆ ಎಂದು ವನಜಾಕ್ಷಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...