alex Certify ನಾವು ಸತ್ತ ಮೇಲೆ ಬರ್ತಾರೆನೋ… ಅಳಲು ಕೇಳದೇ ಹೋದ ಸಿಎಂ ವಿರುದ್ಧ ಹುಣಸೋಡು ಗ್ರಾಮಸ್ಥರ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾವು ಸತ್ತ ಮೇಲೆ ಬರ್ತಾರೆನೋ… ಅಳಲು ಕೇಳದೇ ಹೋದ ಸಿಎಂ ವಿರುದ್ಧ ಹುಣಸೋಡು ಗ್ರಾಮಸ್ಥರ ಆಕ್ರೋಶ

ಶಿವಮೊಗ್ಗ: ನಾವು ಸತ್ತ ಮೇಲೆ ಮುಖ್ಯಮಂತ್ರಿ ಬರುತ್ತಾರೆಯೇ ಎಂದು ಹುಣಸೋಡು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆಯಿಂದ ನೋವು ಹೇಳಿಕೊಳ್ಳಲು ಕಾಯುತ್ತಿದ್ದೇವೆ. ಆದರೆ, ಸಿಎಂ ಕೇವಲ ಕಾಟಾಚಾರದ ಭೇಟಿ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ರಾಜಕಾರಣಿಗಳು, ಅಧಿಕಾರಿಗಳು ನಮಗೆ ಬೇಕೆ ಎಂದು ಪ್ರಶ್ನಿಸಿದ್ದಾರೆ.

ನಮ್ಮಲ್ಲಿ ನೋವು ಕೇಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಹಾಗೆ ಬಂದರೂ ಹೀಗೆ ಹೋದರು. ಏನು ಗೊತ್ತಾಗಲಿಲ್ಲ. ಯಾರೊಬ್ಬರೂ ನಮ್ಮ ಬಳಿ ಬಂದು ಸಮಸ್ಯೆಯನ್ನು ಆಲಿಸಲಿಲ್ಲ. ಕಲ್ಲುಕ್ವಾರೆಯಿಂದಾಗಿ ಸುತ್ತಲಿನ ನಿವಾಸಿಗಳಿಗೆ ಭಾರಿ ತೊಂದರೆಯಾಗಿದೆ ಎಂದು ಹುಣಸೋಡು ಗ್ರಾಮಸ್ಥರು ಹೇಳಿದ್ದಾರೆ.

ಹುಣಸೋಡು ಕಲ್ಲು ಕ್ವಾರೆ ಸ್ಪೋಟದ ಸ್ಥಳಕ್ಕೆ ಇಂದು ಸಿಎಂ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರು ಗ್ರಾಮಸ್ಥರ ಸಮಸ್ಯೆ ಆಲಿಸಲಿಲ್ಲ ಎಂದು ಆರೋಪಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...