alex Certify ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ.

ಬಿಹಾರ ಮೂಲದ ರಂಜಿತ್‌ ಸೌ ಎಂಬ ವ್ಯಕ್ತಿ ಕೋಲ್ಕತ್ತಾದಲ್ಲಿ ವ್ಯಾನ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇವರು ಇಲ್ಲಿನ ದತ್‌ ಬೀದಿಯಲ್ಲಿ ಮನೆಯೊಂದರ ಕೆಳಗೆ ಮಲಗುತ್ತಿದ್ದರು.

ತಮ್ಮ ಸ್ನೇಹಿತರೊಂದಿಗೆ ಆಗಾಗ ಮದ್ಯ ಸೇವಿಸುತ್ತಿದ್ದ ಸೌ, ಶನಿವಾರ ರಾತ್ರಿ ಇಂಥದ್ದೇ ಒಂದು ಪಾರ್ಟಿ ವೇಳೆ ಸ್ನೇಹಿತರೊಂದಿಗೆ ಮಾತಿನ ಯುದ್ಧಕ್ಕೆ ಇಳಿದಿದ್ದಾರೆ. ಈ ವೇಳೆ 100 ರೂಪಾಯಿ ಮರಳಿ ಪಾವತಿ ಮಾಡುವ ಸಂಬಂಧ ಸ್ನೇಹಿತರಲ್ಲೇ ಕಚ್ಚಾಟ ಆರಂಭಗೊಂಡಿದ್ದು, ಅವರಲ್ಲೊಬ್ಬ ಇಟ್ಟಿಗೆ ತೆಗೆದುಕೊಂಡು ಸೌ ತಲೆಗೆ ಚಚ್ಚಿದ್ದಾನೆ.

ಮೃತ ದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಆ ಪ್ರದೇಶದ ಸಿಸಿ ಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಅವರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...