ವಿಶ್ವದಾದ್ಯಂತ ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಭಾರತದಲ್ಲಿಯೂ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸಲಾಗ್ತಿದೆ. ಭಾರತದಲ್ಲಿ ಹೋಮಿಯೋಪತಿ ಮೂಲಕ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಯತ್ನವನ್ನೂ ನಡೆಸಲಾಗ್ತಿದೆ.
ಡಾ.ಜವಾಹರ್ ಷಾ ಅವರು ಮುಂಬೈಯಲ್ಲಿ 40 ವರ್ಷಗಳಿಂದ ಹೋಮಿಯೋಪತಿ ಅಭ್ಯಾಸ ಮಾಡುತ್ತಿದ್ದಾರೆ. ಡಾ. ಷಾ ಅವರು ವಿಶ್ವದಾದ್ಯಂತ ಸುಮಾರು 100 ಹೋಮಿಯೋಪತಿ ವೈದ್ಯರೊಂದಿಗೆ ವಿಶೇಷ ಔಷಧಿ ಅಭಿವೃದ್ಧಿಪಡಿಸಿದ್ದಾರೆ. ಈ ಔಷಧಿ ಮಾನವ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇಲ್ಲಿಯವರೆಗೆ 22000 ಪೊಲೀಸರು, 4000 ಅಗ್ನಿಶಾಮಕ ದಳದ ನೌಕರರು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಜನರಿಗೆ ಔಷಧಿ ಕಿಟ್ ನೀಡಲಾಗಿದೆ. ಈ ಔಷಧಿ ಸೈಕೋ ನ್ಯೂರೋ ಎಂಡೋಕ್ರೈನ್ ಮೇಲೆ ಪರಿಣಾಮ ಬೀರುತ್ತದೆ. ಆಯುಷ್ ಸಚಿವಾಲಯ ನೀಡಿದ ಸೂಚನೆಯ ಆಧಾರದ ಮೇಲೆ ಈ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ.