alex Certify ಭವಿಷ್ಯನಿಧಿ ಸದಸ್ಯರಿಗೆ ಗುಡ್ ನ್ಯೂಸ್: ಎರಡನೇ ಬಾರಿ ಕೋವಿಡ್ ಅಡ್ವಾನ್ಸ್ – ಆಧಾರ್ ಜೋಡಣೆ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭವಿಷ್ಯನಿಧಿ ಸದಸ್ಯರಿಗೆ ಗುಡ್ ನ್ಯೂಸ್: ಎರಡನೇ ಬಾರಿ ಕೋವಿಡ್ ಅಡ್ವಾನ್ಸ್ – ಆಧಾರ್ ಜೋಡಣೆ ಕಡ್ಡಾಯ

ಶಿವಮೊಗ್ಗ: ಕೋವಿಡ್ 19 ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭವಿಷ್ಯನಿಧಿ ಸದಸ್ಯರ ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು ಭವಿಷ್ಯ ನಿಧಿ ಸಂಸ್ಥೆಯು, ಚಂದಾದಾರಿಗೆ ಕೋವಿಡ್ 19ರ ಅಡಿಯಲ್ಲಿ ವಿಶೇಷ ಮುಂಗಡ ಸೌಲಭ್ಯ ಒದಗಿಸಿತ್ತು. ಇದೀಗ 2ನೇ ಅಲೆ ಪರಿಸ್ಥಿತಿಯಲ್ಲಿ 2ನೇ ಬಾರಿ ಮುಂಗಡ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಸದಸ್ಯರು ಇದರ ಸದುಪಯೋಗಪಡೆಯಬಹುದು.

ಆಧಾರ್ ಜೋಡಣೆ ಕಡ್ಡಾಯ:

ಸಾಮಾಜಿಕ ಭದ್ರತೆ 2020 ರ ಸೆಕ್ಷನ್ 142 ನ್ನು ದಿನಾಂಕ: 30-05-2021 ರಿಂದ ಅನ್ವಯಗೊಳಿಸಲಾಗಿದ್ದು, ಸಂಹಿತೆಯ ನಿಬಂಧನೆಗಳುನುಸಾರ ಫಲಾನುಭವಿಯ ಗುರುತನ್ನು ಸ್ಥಾಪಿಸಲು ಆಧಾರ್ ಸಂಖ್ಯೆ ಅವಶ್ಯಕವಾಗಿರುತ್ತದೆ.

ಈ ನಿಬಂಧನೆಯ ಅನುಸಾರ ಭವಿಷ್ಯನಿಧಿ ಸಂಸ್ಥೆಯು ದಿನಾಂಕ: 01-06-2021 ರಿಂದ ಇಸಿಆರ್ ಸಲ್ಲಿಸಲು ಸದಸ್ಯರ ಆಧಾರ್‌ನ್ನು ಕಡ್ಡಾಯವಾಗಿ ಯುಎಎನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಆದೇಶಿಸಲಾಗಿದೆ. ಈ ಪ್ರಕಾರ ಎಲ್ಲಾ ಉದ್ಯೋಗದಾತರು ಜೂನ್ 1 ರಿಂದ ಇಸಿಆರ್ ಫೈಲ್ ಮಾಡಲು ಭವಿಷ್ಯನಿಧಿ ಸದಸ್ಯರ ಆಧಾರ್‌ನ್ನು ಯುಎಎನ್ ಸಂಖ್ಯೆಯೊಂದಿಗೆ ಜೋಡಿಸುವುದು ಕಡ್ಡಾಯವಾಗಿದೆ ಎಂದು ಭವಿಷ್ಯನಿಧಿ ಪ್ರಾದೇಶಿಕ ಕಚೇರಿಯ ಆಯುಕ್ತರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...