ಬೆಂಗಳೂರು: ಅರ್ಹ ರೈತರಿಗೆ ಅಗತ್ಯವಾದ ಹೆಚ್ಚುವರಿ ಸಾಲ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಖಡಕ್ ಸೂಚನೆ ನೀಡಿದ್ದು ಬ್ಯಾಂಕುಗಳು ಸಾಲ ವಿತರಣೆ ಗುರಿಯನ್ನು ಹೆಚ್ಚಳ ಮಾಡಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗಾಗಿ ಶೇಕಡ 10 ರಷ್ಟು ಸಾಲವನ್ನು ಹೆಚ್ಚುವರಿಯಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರೈತರಿಗೆ ಸಮೀಪದ ಬ್ಯಾಂಕುಗಳನ್ನು ಸಂಪರ್ಕಿಸುವಂತೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಂದೇಶ ಕಳುಹಿಸಲಾಗುತ್ತಿದೆ. ಬ್ಯಾಂಕಿಗೆ ಕೃಷಿಕರನ್ನು ಕರೆಸಿಕೊಂಡು ಸಾಲ ವಿಸ್ತರಣಾ ಯೋಜನೆ ಅಡಿ ಚಿನ್ನಾಭರಣ ಅಡಮಾನ, ಕಿಸಾನ್ ಕ್ರೆಡಿಟ್ ಕಾರ್ಡ್ ಇರುವ, ನಿಯಮಿತವಾಗಿ ಸಾಲ ಪಡೆದು ಮರುಪಾವತಿಸುವ ರೈತರಿಗೆ ಬ್ಯಾಂಕುಗಳು ಶೇಕಡ 10 ರಷ್ಟು ಹೆಚ್ಚುವರಿ ಸಾಲವನ್ನು ನೀಡಲಿವೆ.
ಕನಿಷ್ಠ 10 ಸಾವಿರ ರೂಪಾಯಿಯಿಂದ 50 ಸಾವಿರ ರೂಪಾಯಿವರೆಗೆ ಹೆಚ್ಚಿನ ಸಾಲವನ್ನು ಪಡೆಯಬಹುದಾಗಿದೆ. ಸಾಲ ಮರುಪಾವತಿ ಮಾಡಲು 3 ವರ್ಷ ಕಾಲಮಿತಿ ಇದ್ದು ಹೆಚ್ಚುವರಿ ಸಾಲ ಪಡೆಯಲು ಆಸ್ತಿ ಅಡಮಾನ ಭದ್ರತೆ ಬೇಕಾಗಿಲ್ಲ ಎಂದು ಹೇಳಲಾಗಿದೆ.