alex Certify ಕಿಸಾನ್ ಸಮ್ಮಾನ್ ನಿಧಿ ಯೋಜನೆ:‌ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಸಾನ್ ಸಮ್ಮಾನ್ ನಿಧಿ ಯೋಜನೆ:‌ ರೈತ ಸಮುದಾಯಕ್ಕೆ ಇಲ್ಲಿದೆ ಮಹತ್ವದ ಮಾಹಿತಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಶುರುವಾಗಿ 22 ತಿಂಗಳು ಕಳೆದಿದೆ. ಪ್ರತಿ ವರ್ಷ ರೈತರಿಗೆ 6 ಸಾವಿರ ರೂಪಾಯಿ ನೀಡುವ ಈ ಯೋಜನೆ ಇದಾಗಿದ್ದು, ಇದ್ರಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

ಕಿಸಾನ್ ಸಮ್ಮಾನ್ ನಿಧಿಯಲ್ಲಿ ಖಾತೆ ಹೊಂದಿದ್ದು, ಈವರೆಗೂ ಹಣ ವರ್ಗಾವಣೆಯಾಗಿಲ್ಲವೆಂದ್ರೆ ಅದ್ರ ಬಗ್ಗೆ ತಿಳಿದುಕೊಳ್ಳುವುದು ಈಗ ಸುಲಭವಾಗಿದೆ. ಪಿಎಂ ಕಿಸಾನ್ ಕ್ರೆಡಿಟ್ ಪೋರ್ಟಲ್ ಗೆ ಹೋಗಿ ಅಲ್ಲಿ ಆಧಾರ್, ಮೊಬೈಲ್, ಬ್ಯಾಂಕ್ ಖಾತೆ ನಂಬರ್ ನೊಂದಾಯಿಸಿ ಮಾಹಿತಿ ಪಡೆಯಬಹುದು.

ಈ ಯೋಜನೆಗೆ ಹೆಸರು ನೋಂದಾಯಿಸಲು ರೈತರು ಅಧಿಕಾರಿಗಳ ಬಳಿ ಹೋಗ್ಬೇಕಾಗಿಲ್ಲ. ಕಿಸಾನ್ ಪೋರ್ಟಲ್ ಗೆ ಹೋಗಿ ಹೆಸರು ನೊಂದಾಯಿಸಬಹುದು. ಎಲ್ಲ ರೈತರಿಗೂ ಯೋಜನೆ ಲಾಭ ಸಿಗಲಿ ಎನ್ನುವ ಕಾರಣಕ್ಕೆ ಪೋರ್ಟಲ್ ನಲ್ಲಿಯೇ ಹೆಸರು ನೋಂದಾಯಿಸಲು ಸರ್ಕಾರ ಅವಕಾಶ ಮಾಡಿಕೊಡ್ತಿದೆ. ಅಲ್ಲದೆ ದಾಖಲೆಗಳ ಪರಿಶೀಲನೆಗೂ ಕಡಿಮೆ ಸಮಯ ಹಿಡಿಯಲಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಲಾಭ ಪಡೆಯುತ್ತಿರುವ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲು ಮೋದಿ ಸರ್ಕಾರ ನಿರ್ಧರಿಸಿದೆ. ಅಂದರೆ, ಪಿಎಂ-ಕಿಸಾನ್ ಯೋಜನೆ ಕೆಸಿಸಿಗೆ ಸಂಬಂಧ ಹೊಂದಿದೆ. ಇದರೊಂದಿಗೆ 3 ಲಕ್ಷ ರೂಪಾಯಿವರೆಗಿನ ಸಾಲಗಳು ಶೇಕಡಾ 4ರ ದರದಲ್ಲಿ ಲಭ್ಯವಾಗಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...