alex Certify ‘ಕಿಸಾನ್ ಸಾರಥಿ ಯೋಜನೆ’: ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಿಸಾನ್ ಸಾರಥಿ ಯೋಜನೆ’: ರೈತರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರೈತರ ಆದಾಯ ಹೆಚ್ಚಿಸಲು ಮೋದಿ ಸರ್ಕಾರ ಕಿಸಾನ್ ಸಾರಥಿ ಯೋಜನೆ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ.

ಈ ವೇದಿಕೆಯ ಸಹಾಯದಿಂದ ರೈತರು ಅಗತ್ಯವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ತಮ್ಮದೇ ಭಾಷೆಯಲ್ಲಿ ರೈತರಿಗೆ ಕಿಸಾನ್ ಸಾರಥಿ ಯೋಜನೆಯ ಮೂಲಕ ಮಾಹಿತಿ ಸಿಗಲಿದೆ.

ಬೆಳೆ, ತರಕಾರಿಯನ್ನು ಮಾರಾಟ ಮಾಡಲು ಅನುಕೂಲವಾಗಲಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಿಸಾನ್ ಸಾರಥಿ ಯೋಜನೆ ಉದ್ಘಾಟಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ರೈತರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಬಗ್ಗೆ ವೈಯಕ್ತಿಕ ಸಮಾಲೋಚನೆಗಳನ್ನು ವಿಜ್ಞಾನಿಗಳಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪಡೆಯಬಹುದು ಎಂದರು.

ರೈತರ ಬೆಳೆಗಳನ್ನು ತಮ್ಮ ಹೊಲಗಳಿಂದ ಗೋದಾಮು, ಮಾರುಕಟ್ಟೆ ಮತ್ತು ಮಾರಾಟ ಮಾಡಲು ಬಯಸುವ ಸ್ಥಳಗಳಿಗೆ ಸಾಗಿಸುವ ಕ್ಷೇತ್ರದಲ್ಲಿ ಹೊಸ ತಾಂತ್ರಿಕ ಮಧ್ಯಸ್ಥಿಕೆಗಳ ಕುರಿತು ಸಂಶೋಧನೆ ನಡೆಸಬೇಕಿದೆ ಎಂದು ಹೇಳಿದರು.

ಕಿಸಾನ್ ಸಾರಥಿ ಯೋಜನೆ ಪ್ರಯೋಜನ

ರೈತ ರಥದ ಸಹಾಯದಿಂದ ರೈತರು ಉತ್ತಮ ಬೆಳೆ, ಸರಿಯಾದ ಪ್ರಮಾಣದ ಉತ್ಪನ್ನಗಳು ಮತ್ತು ಇತರ ಅನೇಕ ಮೂಲಭೂತ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ರೈತರು ಬೆಳೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ವಿಜ್ಞಾನಿಗಳಿಂದ ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ತೆಗೆದುಕೊಳ್ಳಬಹುದು. ಅಲ್ಲದೆ, ನೀವು ಕೃಷಿಯ ಹೊಸ ವಿಧಾನಗಳನ್ನು ಕಲಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...