alex Certify ರೇಷನ್ ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೇಷನ್ ಕಾರ್ಡ್ ಹೊಂದಿರುವವರಿಗೊಂದು ಮಹತ್ವದ ಸುದ್ದಿ

ದೇಶಾದ್ಯಂತ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಪ್ರಸ್ತುತ ಈ ಯೋಜನೆಯನ್ನು ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ. ಈ ಪ್ರಕ್ರಿಯೆಯಡಿ ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡಲು ಹೇಳಲಾಗಿದೆ. ಸೆಪ್ಟೆಂಬರ್ 30ರವರೆಗೆ ಆಧಾರ್ ಜೊತೆ ಪಡಿತರ ಚೀಟಿ ಲಿಂಕ್ ಮಾಡಬೇಕು. ಈ ಲಿಂಕ್ ಮಾಡದಿದ್ದರೆ ಜನರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ.

ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಅಥವಾ ವಯಸ್ಸಿನ ಬದಲಾವಣೆಗೆ ಉತ್ತರಾಖಂಡ ಸರ್ಕಾರ 25 ರೂಪಾಯಿಗಳ ಕರಡು ರೂಪಿಸುವುದನ್ನು ಕಡ್ಡಾಯ ಮಾಡಿದೆ. ಕೆಲವು ರಾಜ್ಯಗಳು ಪಡಿತರ ಪೋರ್ಟಬಿಲಿಟಿ ಸೌಲಭ್ಯಕ್ಕಾಗಿ ಶುಲ್ಕ ವಿಧಿಸುತ್ತವೆ. ಅನೇಕ ರಾಜ್ಯ ಸರ್ಕಾರಗಳು ಈ ಸೇವೆಯನ್ನು ತಮ್ಮ ನಾಗರಿಕರಿಗೆ ಮಾತ್ರ ಉಚಿತವಾಗಿ ನೀಡುತ್ತವೆ.

ಪಡಿತರ ಚೀಟಿ ತಯಾರಿಸುವುದು ರಾಜ್ಯದ ವಿಷಯ ಎಂದು ಕೇಂದ್ರ ಗ್ರಾಹಕ ಮತ್ತು ಆಹಾರ ಸಚಿವಾಲಯ ಹೇಳಿದೆ. ಹಣ ಸಂಗ್ರಹ ಅಥವಾ ಮುಕ್ತ ಸೇವೆ ನೀಡುವುದು ಆಯಾ ರಾಜ್ಯಕ್ಕೆ ಬಿಟ್ಟ ವಿಷ್ಯ. ಪಡಿತರ ಕಾರ್ಡ್ ಪೋರ್ಟಬಿಲಿಟಿ ಸೌಲಭ್ಯಕ್ಕೆ ಸಂಬಂಧಿಸಿದಂತೆ, ಪಡಿತರ ಚೀಟಿಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಮತ್ತು ಇಪಿಓಎಸ್ ಯಂತ್ರದೊಂದಿಗೆ ಇಂಟರ್ನೆಟ್ ಸೇವೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಇದಲ್ಲದೆ ಪಡಿತರ ಪೋರ್ಟಬಿಲಿಟಿ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...