ಆರೋಗ್ಯ ಸೇತುದಲ್ಲಿ ಗೌಪ್ಯತೆಯ ಬಗ್ಗೆ ಎದ್ದಿರುವ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸಾಫ್ಟ್ ವೇರ್ ಅಭಿವೃದ್ಧಿಗೆ ತನ್ನ ಮೂಲ ಕೋಡ್ ತೆರೆಯಲು ಸರ್ಕಾರ ಘೋಷಿಸಿತು. ಇದರೊಂದಿಗೆ ಸರ್ಕಾರವು ಅದರಲ್ಲಿನ ನ್ಯೂನತೆಗಳನ್ನು ಕಂಡುಹಿಡಿದ ವ್ಯಕ್ತಿಗೆ ದೊಡ್ಡ ಮೊತ್ತದ ಬಹುಮಾನವನ್ನೂ ಘೋಷಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಜನರನ್ನು ಎಚ್ಚರಿಸಲು ಆರೋಗ್ಯ ಸೇತು ಆಪ್ ಪ್ರಾರಂಭಿಸಲಾಗಿದೆ. ಆದರೆ ಜನರು ಈ ಆಪ್ ಮೂಲಕ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತಾರೆ. ವೈಯಕ್ತಿಕ ಮಾಹಿತಿ ಬೇರೆಯವರಿಗೆ ಸಿಗ್ತಿದೆ ಎಂದು ಕೆಲವರು ಆರೋಪಿಸಿದ್ದರು. ಈ ಆತಂಕವನ್ನು ಪರಿಹರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಗಾಗಿ ಈ ಅಪ್ಲಿಕೇಶನ್ನ ಮೂಲ ಕೋಡ್ ತೆರೆಯಲಾಗಿದೆ.
ಈ ಅಪ್ಲಿಕೇಶನ್ನಲ್ಲಿ ನ್ಯೂನತೆಗಳನ್ನು ಕಂಡು ಹಿಡಿಯುವ ಜನರಿಗೆ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು. ಇದರಲ್ಲಿ ದೋಷಗಳನ್ನು ಕಂಡು ಹಿಡಿದು, ಅದರ ಕಾರ್ಯಕ್ರಮದ ಸುಧಾರಣೆಯನ್ನು ಸೂಚಿಸುವವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುವುದು. ಪ್ರತಿ ಮೂರು ವಿಭಾಗಗಳಲ್ಲಿ ಒಂದು ಲಕ್ಷ ರೂಪಾಯಿವರೆಗೆ ಪ್ರಶಸ್ತಿಯನ್ನು ನೀಡಲಾಗುವುದು. ಕೋಡ್ ಸುಧಾರಣೆ ಸೂಚಿಸಿದ್ದಕ್ಕಾಗಿ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿದೆ.