ಇಡಿ ವಿಶ್ವವೇ ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ಇದರ ನಿಯಂತ್ರಣಕ್ಕಾಗಿ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಜಾರಿಗೊಳಿಸಿದ್ದು, ಹೀಗಾಗಿ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು.
ಇದರ ಪರಿಣಾಮ ವ್ಯಾಪಾರ -ವಹಿವಾಟು ನೆಲಕಚ್ಚಿದ್ದು, ಜನತೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆಯೂ ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಗಳಿಕೆ ದಂಗಾಗಿಸುವಂತಿದೆ.
ಅಂದಹಾಗೆ ಮುಕೇಶ್ ಅಂಬಾನಿ ಲಾಕ್ಡೌನ್ ಅವಧಿಯಲ್ಲಿ 10 ಶತಕೋಟಿ ಡಾಲರ್ (75,000 ಕೋಟಿ ರೂಪಾಯಿ) ಗಳಿಸಿದ್ದು, ಇದು ಹೂಡಿಕೆಯಿಂದ ಬಂದ ಹಣವಾಗಿದೆ.
2021 ರ ಮಾರ್ಚ್ ವೇಳೆಗೆ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಸಂಪೂರ್ಣ ಸಾಲ ಮುಕ್ತಗೊಳಿಸುವ ಗುರಿ ಹೊಂದಿರುವ ಮುಕೇಶ್ ಅಂಬಾನಿ ಷೇರುಗಳನ್ನು ಮಾರಾಟ ಮಾಡುತ್ತಿದ್ದು, ಹೂಡಿಕೆಯ ರೂಪದಲ್ಲಿ ಅವರಿಗೆ ಇಷ್ಟು ಹಣ ಬಂದಿದೆ.