alex Certify ವಿವಾದಾತ್ಮಕ ಟ್ವೀಟ್ ಮಾಡಿ ನಂತರ‌ ಡಿಲಿಟ್ ಮಾಡಿದ ಕಂಗನಾ ರಣಾವತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾದಾತ್ಮಕ ಟ್ವೀಟ್ ಮಾಡಿ ನಂತರ‌ ಡಿಲಿಟ್ ಮಾಡಿದ ಕಂಗನಾ ರಣಾವತ್

ಮುಂಬೈ: “ಅವರ ತಲೆ ತೆಗೆಯುವ ಕಾಲ ಬಂದಿದೆ” ಎಂಬ ಕಂಗ‌ನಾ ರಣಾವತ್ ಅವರ ಟ್ವೀಟ್ ವಿವಾದ ಹುಟ್ಟಿಸಿದೆ. ಬಳಿಕ ಕಂಗನಾ ತಮ್ಮ ಹೇಳಿಕೆಯನ್ನು ಡಿಲಿಟ್ ಮಾಡಿದ್ದಾರೆ.‌

ಸೈಫ್ ಅಲಿ ಖಾನ್ ಅವರ ಅಮೇಜಾನ್ ಪ್ರೈಮ್ ನ ತಾಂಡವ ವೆಬ್ ಸಿರೀಸ್ ಬಗ್ಗೆ ಮಾತನಾಡಿದ ಕಂಗನಾ. “ಶ್ರೀ ಕೃಷ್ಣ ಶಿಶುಪಾಲನ 99 ತಪ್ಪುಗಳನ್ನು ಕ್ಷಮಿಸಿದ.‌ ಮೊದಲು ಶಾಂತಿ, ನಂತರ ಕ್ರಾಂತಿ. ಅವರ ತಲೆ ತೆಗೆಯುವ ಕಾಲ ಬಂದಿದೆ. ಜೈ ಶ್ರೀ ಕೃಷ್ಣ” ಎಂದು ಟ್ವೀಟ್ ಮಾಡಿದ್ದರು.

ಅದನ್ನು ನೋಡಿ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಂತಿಯನ್ನು ಕದಡುವ, ಹಿಂಸೆಯನ್ನು ಪ್ರೇರೇಪಿಸುವ ಹೇಳಿಕೆಯಾಗಿದೆ ಎಂದು ದೂರಿದ್ದರು. ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲು ಮುಂದಾಗಿತ್ತು. ನಂತರ ಅವರು ತಾವು ಮಾಡಿದ ಟ್ವೀಟ್ ಡಿಲಿಟ್ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...