alex Certify ಕಷ್ಟದಲ್ಲಿ ಕೈ ಹಿಡಿದವರಿಗೆ ಮಾಲಾಶ್ರೀ ಧನ್ಯವಾದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಷ್ಟದಲ್ಲಿ ಕೈ ಹಿಡಿದವರಿಗೆ ಮಾಲಾಶ್ರೀ ಧನ್ಯವಾದ

ಖ್ಯಾತ ನಿರ್ಮಾಪಕ ಕೋಟಿ ರಾಮು ನಿಧನದ ಸಂದರ್ಭದಲ್ಲಿ ನೆರವಾದವರಿಗೆ ಭಾವುಕ ಪತ್ರದ ಮೂಲಕ ನಟಿ ಮಾಲಾಶ್ರೀ ಧನ್ಯವಾದ ಹೇಳಿದ್ದಾರೆ.

ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕದ ಅವರು ಪತಿ ರಾಮು ನಿಧನದ ಸಂದರ್ಭದಲ್ಲಿ ನೆರವಾದವರಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ಹದಿನೈದು ದಿನಗಳು ನೋವಿನ ದಿನಗಳಾಗಿದ್ದವು. ಏನು ಮಾಡಬೇಕೆಂದು ಗೊತ್ತಾಗದಂತಾಗಿತ್ತು. ರಾಮು ನಿಧನದಿಂದ ನಮ್ಮ ಹೃದಯ ಚೂರು ಚೂರಾಗಿತ್ತು. ನಮ್ಮೆಲ್ಲರ ಆಧಾರಸ್ತಂಭವಾಗಿದ್ದ ಅವರ ನಿಧನದಿಂದ ಇಡೀ ಚಿತ್ರರಂಗ ಪ್ರತಿಕ್ರಿಯಿಸಿದ ನೋಡಿ ದುಃಖ ಉಮ್ಮಳಿಸಿ ಬಂತು. ರಾಮು ಅವರ ಮೇಲೆ ಎಲ್ಲರೂ ಇಟ್ಟಿರುವ ಪ್ರೀತಿ ಇಂತಹ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮದವರು, ತಂತ್ರಜ್ಞರು, ಕಲಾವಿದರು, ಸ್ನೇಹಿತರು, ಅಭಿಮಾನಿಗಳು, ಹಿತೈಷಿಗಳು ಕಷ್ಟದ ಸಮಯದಲ್ಲಿ ಜೊತೆಗೆ ನಿಂತಿದ್ದರು. ಅವರಿಗೆ ಧನ್ಯವಾದಗಳು ಎಂದು ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...