alex Certify ರಾಜ್ ಕುಂದ್ರಾ ಬಂಧನದ ನಂತ್ರ ಮೊದಲ ಬಾರಿ ಈ ಪೋಸ್ಟ್ ಹಂಚಿಕೊಂಡ ಶಿಲ್ಪಾ ಶೆಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ ಕುಂದ್ರಾ ಬಂಧನದ ನಂತ್ರ ಮೊದಲ ಬಾರಿ ಈ ಪೋಸ್ಟ್ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ, ಅಶ್ಲೀಲ ಚಿತ್ರ ತಯಾರಿ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಪರಿಗಣಿಸಲಾಗ್ತಿರುವ ರಾಜ್ ಕುಂದ್ರಾ ವಿಚಾರಣೆ ನಡೆಯುತ್ತಿದೆ. ಪತಿ ಬಂಧನದ ನಂತ್ರ ಸುಮ್ಮನಿದ್ದ ಶಿಲ್ಪಾ ಈಗ ಮೌನ ಮುರಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ,ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಲೇಖಕ ಜೇಮ್ಸ್ ಥರ್ಬರ್ ಬರೆದಿರುವ ಸಂದೇಶವನ್ನು ಶಿಲ್ಪಾ ಹಂಚಿಕೊಂಡಿದ್ದಾರೆ. ಕೋಪದಿಂದ ಹಿಂತಿರುಗಿ ನೋಡಬೇಡಿ ಅಥವಾ ಭಯದಿಂದ ಭವಿಷ್ಯ ಎದುರು ನೋಡಬೇಡಿ. ಆದರೆ ಜಾಗೃತಿಯಿಂದ ಎಲ್ಲವನ್ನೂ ನೋಡಿ ಎಂದ ಸಂದೇಶವನ್ನು ಹಂಚಿಕೊಂಡಿದ್ದಾರೆ.

ನಮ್ಮನ್ನು ನೋಯಿಸಿದವರ ಮೇಲೆ ನಮಗೆ ಕೋಪವಿದೆ. ಆ ನಿರಾಸೆಯನ್ನು ನಾನು ಅನುಭವಿಸಿದ್ದೇನೆ. ಆ ದುರಾದೃಷ್ಟಕರ ಕ್ಷಣವನ್ನು ಎದುರಿಸಿದ್ದೇವೆ. ನಾನು ಜೀವಂತವಾಗಿದ್ದೇನೆ ಎಂಬುದಕ್ಕೆ ಸಂತೋಷ ಪಡುತ್ತೇನೆ. ನಾನು ಈ ಹಿಂದೆ ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲಿ ಸವಾಲುಗಳನ್ನು ಎದುರಿಸುತ್ತೇನೆ. ಇಂದು ನಾನು ನನ್ನ ಜೀವನವನ್ನು ವಿಚಲಿತಗೊಳಿಸುವ ಅಗತ್ಯವಿಲ್ಲವೆಂದು ಶಿಲ್ಪಾ ಬರೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...