alex Certify ಹೈದರಾಬಾದಿಗೆ ಬರುವಂತೆ ರಶ್ಮಿಕಾರನ್ನು ಕರೆದ ವಿಜಯ್ ದೇವರಕೊಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದಿಗೆ ಬರುವಂತೆ ರಶ್ಮಿಕಾರನ್ನು ಕರೆದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೊತೆಯಲ್ಲಿ ಸಿನಿಮಾ ಮಾಡಿದ ನಂತರ ಇಬ್ಬರು ತುಂಬಾ ಕ್ಲೋಸ್ ಆಗಿರೋದು ಗೊತ್ತಿರುವ ವಿಚಾರ. ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗಿಯಾಗುವುದನ್ನು ನೋಡಿದ ಅಭಿಮಾನಿಗಳು ಹಾಗೂ ಸಿನಿಮಾ ರಂಗದಲ್ಲಿ ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾಗಿ ಬೇರೇನೋ ಇದೆ ಎಂಬ ಗುಲ್ಲು ಜೋರಾಗಿ ಕೇಳಿ ಬಂದಿತ್ತು. ಈ ಇಬ್ಬರು ಕೂಡ ಅಷ್ಟೇ ಕ್ಲೋಸ್ ಆಗಿದ್ದರು.

ಆದರೆ ಈ ವದಂತಿ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ ಈ ಇಬ್ಬರು. ಇತ್ತೀಚೆಗಷ್ಟೇ ಅಂದರೆ ಮೇ 9 ರಂದು ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಹಿನ್ನೆಲೆ ಸಿನಿ ಮಂದಿ ಇವರಿಗೆ ವಿಶ್ ಮಾಡಿದ್ದರು. ಅದರಂತೆ ರಶ್ಮಿಕಾ ಕೂಡ ಡಿಯರ್ ಕಾಮ್ರೇಡ್ ಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು
ವಿಶ್ ಮಾಡಿದ್ದಾರೆ. ಇದಕ್ಕೆ ದೇವರಕೊಂಡ ಕೂಡ ರಿಪ್ಲೇ ಮಾಡಿದ್ದಾರೆ.

ಮಂದಣ್ಣ ಹೈದರಾಬಾದ್‌ಗೆ ಬಾ. ಪಾರ್ಟಿ ಮಾಡೋಣ. ನಿನ್ನನ್ನು ನಮ್ಮ ಗ್ಯಾಂಗ್ ಹಾಗೂ ನಾನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ರಿಪ್ಲೇ ಮಾಡಿರುವ ರಶ್ಮಿಕಾ, ನನ್ನನ್ನು ಬಿಟ್ಟು ಯಾವುದೇ ಪಾರ್ಟಿ, ಫನ್ ಮಾಡಬೇಡಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...