ಶಿವರಾಜ್ ಕೆ.ಆರ್. ಪೇಟೆ ಅವರ ಮೊದಲ ಮಗ ವಂಶಿಕ್ ಬರ್ತ್ ಡೇಗೆ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರೇ ಸೆರೆ ಹಿಡಿದಿರುವ ವನ್ಯಜೀವಿ ಫೋಟೋವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಕುರಿತು ಶಿವರಾಜ್ ಕೆ.ಆರ್. ಪೇಟೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇವತ್ತು ಮೊದಲ ಮಗ ವಂಶಿಕ್ ನ ಹುಟ್ಟಿದ ದಿನ ನಮಗೆ ಅದು ಹಬ್ಬ. ಆದ್ರೆ ಈ ವರ್ಷ ಅವನಿಗೆ ಹುಟ್ಟಿದ ಹಬ್ಬಕ್ಕೆ ಸಂಭ್ರಮ ದುಪ್ಪಟ್ಟು ಖುಷಿ ಅವನಿಗೆ ಮಾತ್ರ ಅಲ್ಲ ನಮಗೂ ಕೂಡ. ಹೆಚ್ಚು ಕಡಿಮೆ 3ವರ್ಷ ಮಗುವಿದ್ದಾಗಿನಿಂದ ಬಾಸ್ ದರ್ಶನ್ ಅಂದರೆ ಅಚ್ಚುಮೆಚ್ಚು. ಅದಕ್ಕೆ ಅವನ ಆಸೆಯಂತೆ ಇವತ್ತು ದರ್ಶನ್ ಸರ್ ಅವರನ್ನ ಮೀಟ್ ಮಾಡಿ ಅವರ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮ ಪಟ್ಟೆವು. ನನ್ನ ಮಗನನ್ನ ಪ್ರೀತಿಯಿಂದ ಮಾತಾಡಿಸಿ ಅವನಿಗೆ ತಾವೇ ತೆಗೆದ ವನ್ಯಜೀವಿಯ ಫೋಟೋವನ್ನ ಕೂಡ ಗಿಫ್ಟ್ ಆಗಿ ಕೊಟ್ಟರು. ಕಿರಿಯರ ಮೇಲಿನ ಅವರ ಪ್ರೀತಿಗೆ ನಾನು ನನ್ನ ಕುಟುಂಬ ಋಣಿ. ಥ್ಯಾಂಕ್ಯೂ ಡಿ ಬಾಸ್ ಹಾಗೆಯೇ ನನ್ನ ಮಗನಿಗೆ ನಿಮ್ಮ ಹಾರೈಕೆಗಳು ಇರಲಿ. ಹುಟ್ಟುಹಬ್ಬದ ಶುಭಾಶಯಗಳು ಮಗನೆ ಎಂದು ಬರೆದುಕೊಂಡಿದ್ದಾರೆ.