alex Certify ಚರ್ಚೆಗೆ ಕಾರಣವಾಗಿದೆ ಕೆಜಿಎಫ್ ನಿರ್ದೇಶಕರ ಆ ಟ್ವೀಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಚೆಗೆ ಕಾರಣವಾಗಿದೆ ಕೆಜಿಎಫ್ ನಿರ್ದೇಶಕರ ಆ ಟ್ವೀಟ್

ಉಗ್ರಂ ಸಿನಿಮಾ ಮೂಲಕ ನಿರ್ದೇಶಕ ಕ್ಯಾಪ್ ಧರಿಸಿದ ಪ್ರಶಾಂತ್ ನೀಲ್, ಕೆಜಿಎಫ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದರು. ಇದೀಗ ಕೆಜಿಎಫ್ 2 ಸಿನಿಮಾ ಬಾಕಿ ಇದೆ. ಇದರ ನಡುವೆ ಪ್ರಶಾಂತ್ ನೀಲ್ ತೆಲುಗಿಗೆ ಹಾರುತ್ತಾರೆ. ಅಲ್ಲಿ ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ವಿಚಾರ ಸ್ಪಷ್ಟವಿಲ್ಲ.

ಆದರೆ ಇದೀಗ ಈ ಸುದ್ದಿಗೆ ಪುಷ್ಟಿ ನೀಡುವಂತೆ ಇತ್ತೀಚೆಗೆ ತೆಲುಗು ನಟ ಜ್ಯೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಪ್ರಶಾಂತ್ ನೀಲ್ ಶುಭಾಷಯ ಕೋರಿದ್ದರು. ಅವರ ಟ್ವಿಟ್ ನೋಡಿದ ಅನೇಕ ಮಂದಿ ಕಿಡಿ ಕಾರಿದ್ದರು.

ಏಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಷ್ಟು ಮಂದಿ ಒಳ್ಳೊಳ್ಳೆ ನಟರಿದ್ದಾರೆ. ಅವರಿಗೆ ನಿದೇರ್ಶನ ಮಾಡುವುದು ಬಿಟ್ಟು ಬೇರೆ ಭಾಷೆಗೆ ಹೋಗುವುದು ಎಷ್ಟು ಸರಿ ಎಂದು ವಿಶ್ ಮಾಡಿದ್ದ ಟ್ವಿಟ್‌ಗೆ ಕಮೆಂಟ್ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಮಾಡಿದ ಒಂದು ಟ್ವಿಟ್ ಇದೀಗ ಸಕ್ಕತ್ ವೈರಲ್ ಆಗುವುದರ ಜೊತೆಗೆ ವಿವಾದಕ್ಕೆ ಗುರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...